Thursday, March 26, 2009

दीर्घसूत्रता - एकं दीर्घलेखनम् ।

आबहोः कालात् न संस्कृतेन लिखितं मयेति सर्वदा मम संस्कृत्तलेखानाम् आरम्भे प्रलापः । एतस्मिन् लेखेऽपि स एव क्रमो मयाश्रितः । कारणं नाम समयाभाव इति तु असत् । यस्मात् कन्नडाङ्ग्लाभ्यां न सर्वदा परं तदा तदा लेखाः लिख्यन्ते मया । संस्कृतॆ विरला लेखा मम ।

कारणान्वेषणकाले तु भगवद्वचनम् एकं मनसि आगतम् । उच्यते खलु गीतासु -
अयुक्तः प्राकृतः स्तब्धः शठॊ नैकृतिकोऽलसः ।
विषादी दीर्घसूत्री च कर्ता तामस उच्यते ॥ (१८-२८)

प्रथमम् अस्य श्लोकस्य तावदर्थपरिशीलनम् । तदनन्तरम् विषयप्रसक्तिः। अर्थार्थं भगवन्तं भाष्यकारं श्रीशङ्करमवलम्बे ।
अयुक्तॊ नाम असमाहितः । यस्य मनसि समाधानं न विद्यते स अयुक्तः।
प्राकृतॊ नाम असंस्कृतबुद्धिः । यस्य बुद्धिः संस्कारविहीना स प्राकृतः।
स्तब्धः विनयविहीनः । छान्दॊग्यश्रुतौ श्वेतकॆतुः यदा द्वादशवर्षाध्ययनानन्तरं स्वगृहं प्रत्यागच्छति तदा ".... महामना अनूचानमानी स्तब्धॊ एयाय" इति तस्य विवरणं दृश्यते । तदनन्तरं पिता तस्य भगवदुद्दालको ब्रह्मतत्त्वं बॊधयतीति तु भिन्नं।
शठॊ वञ्चकः । नैकृतिकः अन्येषां वृत्तीनां जीविकानां च छेदकः ।
अलसो यत् करणीयमस्ति तद्विषयेऽपि यस्य अप्रवृत्तिः ।
विषादी विषादम् एव सदावलम्बते एष इति ।
दीर्घसूत्री अधुना कर्तव्यविषयेऽपि "श्वः कुर्मः । परश्वः अन्यदा वा कुर्मः" इति यस्य मतिः सः ।
एते गुणा अवगुणा वा यस्मिन् निवसन्ति स तामस इति उच्यते गीताचार्यॆण।

मम च पुर्वॊक्तावगुणानां च सम्बन्धॊ नास्तीति तु न वक्तुं शक्यते । यद्यपि नास्ति सर्वदा तमोगुणसम्पर्कः तदा तदा उष्ट्रवद् मनोमण्डपं पूर्णं प्रविशति । भाग्यवशात् तु नाहं सर्वावगुणदष्टः ।

कबीर-सद्भिरुक्तम् -
"कल् करे सो आज् कर् ।
आज् करे सो अब् ।" इति ।

मम विषये न तद्वद्द्भाग्यं ।
इदानींतनकार्यं वै प्रसृत्य दिवसेषु च।
करॊति पुनरन्यच्च दीर्घसूत्री स कथ्यते ।।
इति मे स्थितिः । ततः सोऽहं दीर्घसूत्री । सा च दीर्घसूत्रता अस्याश्च अग्रजः आलस्यं नाम मनसि मधुरायॆते । किमपि कर्तुमुद्युक्तमना यदाहं अन्यत् किमपि दृष्टिपथमायाति । यथा राज्ञः पुरतः नूतने वस्तुदर्शने मन्त्रिणः राजकार्यं त्यक्त्वा अपसरन्ति तथैव मनो मे प्रस्तुतकार्यं आपसारयित्वा नूतनं रुचिकरं प्रकाशयति ।

आलस्यं तदानींतने समये अमृतवत् आस्वाद्यं अतिमधुरं च भासते । तस्य विषस्वरूपस्तु गच्छता कालेनैव ज्ञायते । आलस्यममृतं विषम् - इति तु न व्यर्थोक्तिः।

तेन गोमुखव्याघ्रेण आलस्यामृतविषेण कतिपयेषु अवसरेषु बाधितोऽपि आलस्यपरं एव चित्तं मे सर्वदा इति तु चित्रम् । अस्माकं सुभाषितकाराः आलस्य-दीर्घसूत्रतायॊः विषये सदाजागृताः अन्यान् अप्रमत्तान् कर्तुम् उद्युक्ताः सन्ति ।

उदाहरणमेकम् अत्र विद्यते ।
षड्दोषाः पुरुषेणेह हातव्या भूतिमिच्छता ।
निद्रा तन्द्रा भयं क्रोध आलस्यं दीर्घसूत्रता ॥

शड्दोषेभ्यो मुक्तिः प्रापणीया ऐश्वर्यं इच्छता मनुष्यॆण । के ते? निद्रा - अतिनिद्रा स्वनाशाय एव । तन्द्रा नाम अशक्तिः । भयसहितो पुरुषः न हि किञ्चित्कर्तुमर्हति । क्रोधोऽपि महान् शत्रुः यस्मात् पुरुषे कुपिते सति बुद्धिः मोहमायाति अनर्थसम्भावना च वर्धते । आलस्यं दीर्घसूत्रता च अस्माभिः गत ज्ञातौ विषयौ।

एवं बहूनि सन्त्युदारणानि संस्कृतवाङ्मये। उच्यते खलु "वचने का दरिद्रता?" इति । परं मूलप्रश्नः कथं एताभ्यां मुक्तिरित्येव । वचनसरांसि शतानि भवन्तु परं कार्यजलस्य बिन्दुरपि नास्ति चेत् किं तेन प्रयॊजनम् । मनोनिग्रह एव अत्र कर्तव्यः । कथं पुनरेषः?

समस्यापरिहारार्थं पुनः भगवान् गीताचार्य एव आश्रयणीयः।
असंशयं महाबाहॊ मनो दुर्निग्रहं चलम् ।
अभ्यासेन तु कौन्तेय वैराग्यण च गृह्यते ॥ (६.३५)

जगद्गुरुणापि आङ्गीक्रियते यन्मनसो निग्रहः कष्टम् इति । परं उत्तररूपॆण शब्दद्वयं दीयते तेन । अभ्यासो वैराग्यश्च । अभ्यासो नाम निरन्तरं तदेकचित्तताप्रयत्नः। बुद्धिवाञ्चिते लक्ष्यॆ चित्तस्य एकाग्रताप्रयत्न एव अभ्यासः।

अभ्यासविषयॆ तत्र महत्कष्टम् अनुभूयते प्रायेण सर्वैरपि । उच्यते यद् एकविंशतिदिनपर्यन्तं यस्य कार्यस्य अभ्यासः क्रियते स वशवर्ती भवति इति । परं तावत् पर्यन्तं निरन्तरं तस्मिन् रन्तुं मनो न उत्सहते । बुद्द्यङ्कुशेन कथमपि मनोव्यालनियन्त्रणं करणीयम् ।

पुनश्च वैराग्यम् । वैराग्यं नाम लक्ष्यविरुद्दॆषु वस्तुषु सन्ततदोषदर्शनात् उत्पन्ना अनासक्तिः । अत्रापि बुद्दिकार्यम् अपेक्ष्यते ।

श्लॊकार्धेन भगवान् मनोनिग्रहं उपादिशत् । परं "अगच्छन् वैनतेयोऽपि पदमॆकं न गच्छति" इति श्लोकार्धे यथोक्तं तथैव अभ्यासवैराग्ययॊः अनुष्ठानादेव मनोनिग्रहः सिध्यति । "अभ्यासे चापि वैराग्ये अनुष्ठानशक्तिं दॆहि नो भगवन्" इति प्रार्थनं कर्तुम् शक्नुमः ।

श्रीमद्-विरोधिनामसंवत्सरस्य सर्वेभ्यो हार्दिकाः शुभाशयाः ।

अत्र कश्चिद्विशेषः । रोधो नाम नियमनं (आङ्ग्ले stop इव) । सामान्यतः विरोधो नाम विशेषः रोधः इति अर्थः स्वीक्रियते । यस्य विरोधः स विरोधी । कस्मात् विरोधीति संवत्सरस्य अमङ्गलं नाम? न तथा यस्मादत्र शक्यते चमत्कर्तुम् । विरॊधः इत्यत्र विगतः रोधः इति अर्थ्यते चेत् रोधो यस्मिन् संवत्सरे नास्ति स विरोधिसंवत्सरः इति शक्यते वक्तुम् । तस्मात् अयं श्रीमद्विरोधिसंवत्सरो नो द्वितीयार्थद्योतनो भवेदिति काङ्क्षन् विरमामि ।
॥ इति शम् ॥

Wednesday, March 11, 2009

ಕಾಮನ ಹುಣ್ಣಿಮೆಯೋ ಕೃಷ್ಣನ ರಂಗಿನಾಟವೋ

ನಿನ್ನೆ ಫಾಲ್ಗುಣ ಮಾಸದ ಪೂರ್ಣಿಮೆ. ಅಂದರೆ ಹೋಳಿಯ ಹುಣ್ಣಿಮೆ. ಅಪರೂಪವಾಗಿ ರಜೆಯ ದಿನ. ಹೋಳಿಯ ದಿನ ರಜೆಯಿದ್ದ ನೆನಪೇ ಇಲ್ಲ ನನಗೆ. ನಮ್ಮ ಮನೆಯಲ್ಲಿ (ನಾವು ಬಯಲು ಸೀಮೆಯವರು) ಹೋಳಿಯೆಂದರೆ ಅಂಥ ವಿಶೇಷ ಆಚರಣೆಯೇನೂ ಇಲ್ಲ. ಒಂದು ದೇವರ ಪೂಜೆ, ನಂತರ ಒಬ್ಬಟ್ಟಿನ ಊಟ. ಮನೆಯ ಮಕ್ಕಳಿಗೆ ಸಂಜೆ ಆರತಿ. ಇದೇ ವಿಶೇಷವೆಂದು ಹಲವರಿಗನ್ನಿಸಬಹುದು. ಆದರೆ ನೆನ್ನೆ ನನಗೆ ಅಷ್ಟು ವಿಶೇಷವಾಗಿ ತೋರಲಿಲ್ಲ. ಹೋಳಿಯ ಮಹತ್ತ್ವವೇನೆಂಬುದರ ಬಗ್ಗೆ ಆಲೋಚನೆಗೆ ತೊಡಗಿದೆ. ಆಗ ನನಗೆ ತೋಚಿದ್ದನ್ನು ಬರೆಯಬೇಕೆನ್ನಿಸಿ ಇಗೋ ಬರೆದಿದ್ದೇನೆ.

ಎಲ್ಲರಿಗೂ ಹೋಳಿಯೆಂದರೆ ಕಣ್ಣ ಮುಂದೆ ಬರುವುದು ಗುಲಾಲಿನಾಟ. "ಬಂಧನ" ಚಿತ್ರದ ಸುಹಾಸಿನಿಯ ಮೇಲೆ ವಿಷ್ಣುವರ್ಧನ್ ಸುರಿಯುವ ತರಾವರಿ ಬಣ್ಣದ ನೀರು ನೆನಪಿಗೆ ಬರುತ್ತದೆ. ಕಿರಿತನದಲ್ಲಿ ಹೊರಗೆ ಹೋಗಲು ಭಯ - ಎಲ್ಲಿ ಬಣ್ಣ ಮೆತ್ತಿಸಿಕೊಳ್ಳುತ್ತೇನೋ ಎಂದು. ನಾನು ಚೆನ್ನಾಗಿ ಹೋಳಿಯಾಡಿದ್ದು ಒಮ್ಮೆಯೋ ಎರಡು ಬಾರಿಯೋ ಇರಬಹುದು. ನಂತರ ಮೈಮೇಲಿನ ಬಣ್ಣ ಹೋಗಲು ನಾಲ್ಕೈದು ದಿನಗಳೇ ಹಿಡಿದಿದ್ದವು. ಆದರೆ ಈಗ ಎರಡು ತೊಂದರೆಗಳು ಬಂದಿವೆ. ಮೊದಲನೆಯದು - ಬಣ್ಣಗಳು ಜೈವಿಕ ಮೂಲದ್ದಾಗದೆ ಕೇವಲ ರಾಸಾಯನಿಕ ಮೂಲದ್ದಾಗಿವೆ. ಇದರಿಂದ ಚರ್ಮಕ್ಕೆ, ಕಣ್ಣಿಗೆ ಬರುವ ತೊಂದರೆಗಳು ಹಲವು. ಆದರೂ ಬೆಲೆ ಕಡಿಮೆಯೆಂದು ಇದನ್ನೇ ಬಳಸುತ್ತಾರೆ. ಎರಡನೆಯದು - ಹೋಲಿಯ ನೆಪವೊಡ್ಡಿ ಹಲವೆಡೆ ಹರೆಯದ ಹುಡುಗಿಯರ ಮೈಕೈ ತಾಗಿಸಿ ಮೋಜುಮಾಡುವ ಪರಿ ಸಾಧಾರಣವಾಗಿತ್ತು. ಈಗ ಹೆಣ್ಣುಮಕ್ಕಳು ಹೊರಗೆ ಹೋಗದೇ ಇರುವ ದಿನಗಳಲ್ಲಿ ಹೋಳಿಯೂ ಪ್ರಮುಖವಾದುದು. ಆಸಿಡ್ ದಾಳಿಯನ್ನೇ ಮಾಡುತ್ತಾರಂತೆ. ಹಬ್ಬದ ಈ ಮೋಜಿನ ಸಂಗತಿ ವಿಕೃತಗೊಂಡದ್ದು ನಿಜಕ್ಕೂ ವಿಷಾದನೀಯ. 

ಈ ಗುಲಾಲಿನಾಟದ ಐತಿಹ್ಯವೇನೆಂದು ಯೋಚಿಸಹೊರಟೆ. ಶ್ರೀಕೃಷ್ಣನ ಕಿಶೋರಾವಸ್ಥೆಯ ಲೀಲೆಯೇ ಇದಕ್ಕೆ ಪ್ರಮುಖವಾದ ಸ್ಫೂರ್ತಿ ಎಂದು ನನ್ನ ಈಗಣ ಅನಿಸಿಕೆ. ಉತ್ತರಭಾರತದಲ್ಲಿ ಹೋಳಿಯಂದು ಕೃಷ್ಣನು ರಾಧೆ ಮೊದಲಾದ ಗೋಪಿಯರೊಡನೆ ನಡೆಸಿದ ಬಣ್ಣದಾಟದ ನೆನಪು ಮೂಡಿಸಲು ಬಂದ ಹಬ್ಬ. ಬಂಗಾಳ ಮೊದಲಾದ ಕೃಷ್ಣಪಂಥದ ಪ್ರಾಮುಖ್ಯವಿರುವ ಸ್ಥಲಗಳಲ್ಲಿ ಇದೇ ಹಬ್ಬ. ಕೃಷ್ಣನ ಪೂಜೆಯ ಜತೆಗೆ ಹೋಳಿಯ ಓಕುಳಿಯಾಟ. ರಾಧೆಯ ಸ್ಥಾನವೆಂದು ಖ್ಯಾತವಾದ ಬರ್ಸಾನಾ ದಲ್ಲಿಯೂ ಇದು ದೊಡ್ಡ ಹಬ್ಬ. ಆದರೆ ಭಾಗವತ-ವಿಷ್ಣು ಪುರಾಣ-ಹರಿವಂಶ-ಮಹಾಭಾರತವೇ ಮೊದಲಾದ ಗ್ರಂಥಗಳಲ್ಲಿ ರಾಧೆಯ ಹೆಸರೂ ಇಲ್ಲ. ಆದ್ದರಿಂದ ರಾಧೆಯ ಹೆಸರೂ ದಕ್ಷಿಣದಲ್ಲಿ ಅಷ್ಟು ಚಾಲ್ತಿಯಲ್ಲಿರಲಿಲ್ಲ. ಇದರಿಂದ ಈ ಬಣ್ಣದಾಟ ದಕ್ಷಿಣದಲ್ಲಿ ಈಚೆಗೆ ಕಂಡಿದೆ ಎಂದು ಧೈರ್ಯವಾಗಿ ಹೇಳಬಹುದು.

ಬದಲಾಗುತ್ತಿರುವ ಬೆಂಗಳೂರಿನಲ್ಲಿ ಈಚೆಗೆ ಕಾಣಿಸದ ಹೋಳಿಯ ಆಚರಣೆಯೆಂದರೆ ಹಳೆಯ ವಸ್ತುಗಳ ದಹನ. ನಮ್ಮ ಕಡೆ ಹೋಳಿಯೆಂಬ ಹೆಸರು ಬಂದದ್ದೇ ಈಚೆಗೆ. ಕಾಮನ ಹುಣ್ಣಿಮೆಯೋ ಅಥವಾ ಕಾಮನ ಹಬ್ಬವೆಂದೇ ಇದನ್ನು ಕರೆಯುತ್ತಿದ್ದುದು. ಒಂದಿಪ್ಪತ್ತು ವರ್ಷಗಳ ಹಿಂದೆ ಬೀದಿಯ ಸುತ್ತಮುತ್ತಲಿನ ಪಡ್ದೆ ಹುಡುಗರು ಸುತ್ತಲ ಮನೆಗಳ ಹಳೆಯ ಚಾಪೆ, ಪೊರಕೆ ಮೊದಲಾದ ಒಣಗಿದ, ಕೆಲಸಕ್ಕೆ ಬಾರದ ವಸ್ತುಗಳನ್ನಾಯ್ದು ರಸ್ತೆಯ ಚೌಕದಲ್ಲಿ "ಕಾಮಣ್ಣನ ಮಕ್ಕಳು, ಕಳ್ಳ ಸೂ.. ಮಕ್ಕಳು, ಏನೇನು ಕದ್ದರು" ಎಂದೆಲ್ಲ ಕಿರುಚುತ್ತ ಸುಡುವ ಸಡಗರ ಈಗ ಕಾಣೆಯಾಗಿದೆ. ನಿಮ್ಮಲ್ಲಿ ಇದು ಈಚೆಗೆಲ್ಲಾದರೂ ಕಂಡಿದ್ದರೆ ನನಗೆ ದಯವಿಟ್ಟು ತಿಳಿಸಿ. 

ಪ್ರಭಾವಿ-ಸಂಸ್ಕೃತಿಯ ನುಸುಳುವಿಕೆಯ ಉದಾಹರಣೆಯಾಗಿ ಇದನ್ನು ಕಾಣಬಹುದು. ಹಿಂದಿನ ನಮ್ಮ "ದೇಸಿ" ಸಂಸ್ಕೃತಿಯ ಕಾಮನ ಹಬ್ಬ ಹಿಂದಕ್ಕೆ ಸರಿದು ಉತ್ತರ ಭಾರತದ ಸಿನಿಮಾ ಶೋಕಿಯ ಬಣ್ಣದ ಹಬ್ಬ ಇದೇ ಹೋಳಿಯ ಆಚರಣೆ ಅನ್ನುವುದರ ಮಟ್ಟಿಗೆ ಮನೆ ಮಾಡಿದೆ. ಇನ್ನೊಂದು ಚೆನ್ನಿಲ್ಲವೆಂದಲ್ಲ - ಆದರೆ  ನಮ್ಮ ವಸ್ತುವನ್ನು ಕಳೆದುಕೊಂಡಂಥ ಕೊರಗು ಎಲ್ಲೋ ಕಾಡುತ್ತದೆ.

ಈ ಆಚರಣೆಯ ಹಿಂದೆ ಕೆಲವಾರು ಕಥೆಗಳಿವೆ - ರೋಚಕ ಕಥೆಗಳು ಕೂಡ. 

ಮೊದಲನೆಯದು - ಕಾಮ ದಹನ. ಶಿವನು ತನ್ನ ಮೂರನೆ ಕಣ್ಣಿನಿಂದ ತನ್ನಲ್ಲೇ ಕಾಮವನ್ನು ಕೆರಳಿಸಿದ ಮದನನನ್ನು ಸುಟ್ಟ ಕಥೆ ಸುವಿದಿತ. ಈ ಸಂಗತಿಯನ್ನು ಪುರಾಣಗಳಲ್ಲಿ ಮತ್ತು ಕಾಲಿದಾಸನ ಅಮೋಘವಾದ ಕುಮಾರಸಂಭವದಲ್ಲಿ ಚೆನ್ನಾಗಿ ಕಾಣಬಹುದು. ಇಲ್ಲಿನ ವಿಶೇಷಾಂಶಗಳು ನನಗೆ ತಿಳಿದ ಮಟ್ಟಿಗೆ ಎರಡು. ಒಂದು - ಶಿವನಂಥ ದೇವಾಧಿದೇವತೆಯೂ ಒಂದು ಕ್ಷಣಕಾಲ ಕಾಮದಲ್ಲಿ ಸಕ್ತನಾಗಬಹುದೆಂದರೆ ಕಾಮದ ಶಕ್ತಿಯ ಸ್ವರೂಪ ನಮಗೆ ತಿಳಿಯಬರುವುದು. ಎರಡನೆಯದು - ಕಾಮವನ್ನು ನಿಃಶೇಷವಾಗಿ ಸುಡಲು ಸಾಧ್ಯವೆಂಬುದು. ಬುದ್ಧನು ಮಾರನನ್ನು ಗೆದ್ದ ಬಗೆಯೂ ಇದಕ್ಕೆ ಸಂವಾದಿ.  ದೇವೀ ಉಪಾಸಕರು ಆರಾಧಿಸುವ ಶ್ರೀಲಲಿತಾತ್ರಿಪುರಸುಂದರಿಯ ಕಥೆಯೂ ಇಲ್ಲಿಂದಲೇ ಆರಂಭ. ಸುಟ್ಟ ಕಾಮನ ಬೂದಿಯಿಂದ ಭಂಡಾಸುರನ ಜನನ ಇತ್ಯಾದಿಗಳನ್ನು ಲಲಿತೋಪಾಖ್ಯಾನದಲ್ಲಿ ಕಾಣಬಹುದು. ಕಾಮದ ಶಕ್ತಿಯನ್ನು ತೋರುತ್ತಲೇ ಅದನ್ನು ಮೀರಲು ಸಾಧ್ಯವೆಂದು ಹೇಳುವ ಈ ಕಥೆ ಬಹಳ ಸಮಂಜಸವಾಗಿದೆ. ಹೀಗೆ ದಕ್ಷಿಣದಲ್ಲಿ ಶಿವನ ಪೂಜೆಯನ್ನೂ ಈ ದಿನ ಮಾಡುತ್ತಾರೆ.

ಇನ್ನೊಂದು ಕಥೆ - ಹಿರಣ್ಯಕಶಿಪುವಿಗೆ ಸಂಬಂಧಿಸಿದ್ದು. ತನ್ನ ಮಗನಾದ ಪ್ರಹ್ಲಾದನನ್ನು ಸುಡಲು ತನ್ನ ಬೆಂಕಿಯು ಸುಡಲಾರದ ತಂಗಿಯಾದ ಹೋಲಿಕೆಯನ್ನು ಕೇಳಿಕೊಳ್ಳುತ್ತಾನೆ. ಹೋಲಿಕಾ ಪ್ರಹ್ಲಾದನನ್ನು  ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಗ್ನಿಪ್ರವೇಶ ಮಾಡಿದಾಗ ಹರಿಭಕ್ತನಾದ ಪ್ರಹ್ಲಾದನಿಗೆ ಏನೂ ಆಗದೆ ಹೋಲಿಕೆಯು ಬೆಂಕಿಗೆ ಸಿಗುತ್ತಾಳೆ. ಭಕ್ತನ ಉದ್ಧಾರದ ನೆನಪನ್ನು ಹೀಗೆ ಹೋಳಿಯು ಮಾಡಿಸುತ್ತದೆ.

ಮತ್ತೊಂದು ಕಥೆ - ರಘುಮಹಾರಾಜನಿಗೆ ಸಂಬಂಧಪಟ್ಟದ್ದು. (ಓದಿರಿ - ಶ್ರೀ ಪಿ ವಿ ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ, ಭಾಗ ಮೂರು). ಓರ್ವ ರಾಕ್ಷಸಿ (ಢುಂಡಿ ಎಂದು ಅವಳ ಹೆಸರು) ಶಿವನ ವರದಿಂದ ಹರೆಯದ ಹುಡುಗರ ಅಶ್ಲೀಲಶಬ್ದಗಳಿಂದ ಮಾತ್ರ ಸಾವನ್ನಪ್ಪುವ ವರ ಪಡೆದಿದ್ದಳು. ಅವಳ ಅಬ್ಬರ ಅತಿಯಾದಾಗ ರಘುವಿನ ರಾಜ್ಯದ ಯುವಪ್ರಜೆಗಳು ಅಶ್ಲೀಲಶಬ್ದಗಳಿಂದ ಬೈದುಕೊಂಡು ಹಳೆಯ ವಸ್ತುಗಳನ್ನು ಸುಡುತ್ತಾರೆ. ಆಗ ಆಕೆಯ ಸಾವು. ಈ ಕಥೆಯು ಬಹಳ ಪುರಾತನವಾಗಿದೆ.

ಕಾಣೆಯವರು ತಿಳಿಸುತ್ತಾರೆ (ನಮ್ಮ ತಂದೆಯವರೂ ಈ ಆಚರಣೆಯನ್ನು ನೋಡಿದ್ದಾರೆ) ರತಿ-ಮನ್ಮಥರ ಮೂರ್ತಿಗಳನ್ನು ಮನೆಯ ಅಥವಾ ಗ್ರಾಮದ ಚೌಕದಲ್ಲಿಟ್ಟು ಅವರಿಗೆ ಪೂಜೆ ಸಲ್ಲಿಸಿ ಕಾಮದಹನವಾದ ನಂತರದ ಬೆಳಗ್ಗೆ ಪಾನಕ-ಪಣ್ಯಾರಗಳ ಸರಬರಾಜು. ಇಲ್ಲಿಯೂ ಅಶ್ಲೀಲ ಶಬ್ದಗಳ ಪ್ರಯೋಗ ನಡೆಯುತ್ತಿತ್ತು. 

ಸನಾತನ ಧರ್ಮ ಕೃಷಿಮೂಲದ್ದಾಗಿರುವುದರಿಂದ ಪ್ರತಿಯೊಂದು ಹಬ್ಬದಾಚರಣೆಗೂ ಪ್ರಕೃತಿಗೂ ನಿಕಟವಾದ ಸಂಬಂಧ. ಇಲ್ಲಿಯೂ ಹೀಗೆಯೇ. ಮಾಸಗಳ ಗಣನೆಯಲ್ಲಿ ಎರಡು ಬಗೆ. ಈಗಿನ ಹಾಗೆಯ ಆಮಾವಾಸ್ಯೆಯ ಅಂತ್ಯದ್ದು ಒಂದು - ಅಮಾವಾಸ್ಯೆಯಿಂದ ಅಮಾವಾಸ್ಯೆಯ ವರೆಗೆ ತಿಂಗಳ ಎಣಿಕೆ. ಎರಡನೆಯದು ಪೂರ್ಣಿಮೆಯ ಅಂತ್ಯದ ಮಾಸದ ಗಣನೆ - ಇಲ್ಲಿ ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಎಣಿಕೆ. ಎರಡನೆಯ ರೀತಿಯ ಪ್ರಕಾರ ಫಾಲ್ಗುಣ ಪೂರ್ಣಿಮೆ ವರ್ಷದ ಕೊನೆಯನ್ನು ಸೂಚಿಸುತ್ತದೆ. ಒಂದೆಡೆ ಛಳಿಯ ಅಂತ್ಯ, ವಸಂತದ ಆಗಮನ ಇರುವುದರಿಂದ ಇದೊಂದು ಸುಖದ ಕಾಲ. ಪ್ರಕೃತಿಯು ಎಲ್ಲೆಡೆ ಸಸ್ಯಶ್ಯಾಮಲೆಯಾಗಿ ಕಂಗೊಳಿಸುವ ಕಾಲ. ಹಳೆಯ ವರ್ಷದ ಹಳತು ತೊಲಗಲೆಂದು ಹಳೆಯ ವಸ್ತುಗಳನ್ನು ಸುಡುವ ಸಂಪ್ರದಾಯ ಇದ್ದಿರಬಹುದು. ಈ ಆಚರಣೆಯೂ ಹಳೆಯದೇ. ಆದರೆ ಈಚೆಗೆ ಕಾಣಸಿಗುತ್ತಿಲ್ಲ.

ಒಟ್ಟಿನಲ್ಲಿ ಹೋಳಿ ಹಬ್ಬ ಅಥವಾ ಕಾಮನ ಹುಣ್ಣಿಮೆ ರಮಣೀಯವಾದ ರೋಚಕವಾದ ಐತಿಹ್ಯವುಳ್ಳ ಆಚರಣೆ. ಒಂದಷ್ಟು ಗುಣವಿರುವ ಹಿಂದಿನ ಆಚರಣೆಗಳನ್ನು ಮತ್ತೆ ಜಾರಿಗೆ ತರಬಹುದೇ ಎಂಬ ಜಿಜ್ಞಾಸೆ ನನಗೆ. 

ಕೊನೆಯದಾಗಿ ಒಂದು ಮಾತು. ಕಳೆದ ತಿಂಗಳಿನ ವ್ಯಾಲೆಂಟಿನ್ ದಿನಾಚರಣೆಯ ಹಿಂದಣ ಬಿಸಿ ನೆನಪಿಗೆ ಬಂದಿತು. ಒಂದೆಡೆ ರಾಮಸೇನೆಯವರು "ಹಿಂದೂ" ಸಂಸ್ಕೃತಿಯ ಗುತ್ತಿಗೆದಾರರು ತಾವೆಂದು ಎಗರಿದರೆ ಇವರಿಗೆ ಸರಿಯಾಗಿ "ಪಿಂಕ್" ಚಡ್ಡಿಗಳ ಬಣದವರ ಅಬ್ಬರ ಮತ್ತೊಂದೆಡೆ. ನಾನು ನೋಡಿದ ಹಾಗೆ ಸನಾತನ ಧರ್ಮದ ರೀತಿ ಈ ಎರಡು ವಿರುದ್ಧ ಬಣಗಳ ರೀತಿಗಳಿಂದಲೂ ಬೇರೆಯಾಗಿದೆ. ಬೇರೆ ಯಾವ ಧರ್ಮದಲ್ಲಿ ರತಿ-ಮನ್ಮಥರನ್ನಿಟ್ಟು ಪೂಜೆ ಮಾಡುತ್ತಾರೆ? ಇದನ್ನು ಕಂಡ ಸನಾತನ ಧರ್ಮದ "ಮಡಿವಂತಿಕೆ"ಯನ್ನು ಜರೆಯುವ "ಪ್ರಗತಿ"ಪರರು ಈ ಆಚರಣೆಯನ್ನು "ಪ್ರಗತ" ಎಂದು ತೇರ್ಗಡೆ ಮಾಡುತ್ತಾರೋ ಅಥವಾ ವಿಕ್ಟೊರಿಯಾ ರಾಣಿಯ ಕಾಲದ ಮಡಿಯನ್ನು ಮತ್ತೆ ನೆನಪಿಸುವಂತೆ "ಲೋಲುಪತೆ" ಎಂದು ಅನುತ್ತೀರ್ಣ ಮಾಡುತ್ತಾರೋ? ಪ್ರೇಮವೆಂದು ಹೇಳಿ ತಿಪ್ಪೆ ಸಾರಿಸದೆ ಕಾಮನ ಹುಣ್ಣಿಮೆಯೆಂದೇ ಘಂಟಾಘೋಷವಾಗಿ ಹೇಳುವ ಈ ಬಗೆ "ಹಿಂದೂ" ಧರ್ಮದ ಆಚರಣೆಯೆಂದು ರಾಮಸೇನೆಯವರಿಗೆ ಹೇಳಿದರೆ ಅವರು ಮಡಿಮಡಿಯನ್ನು ಬಿಟ್ಟು ಸಿಡಿಸಿಡಿಯಾಗುವರೆ? ಅಥವಾ ಇದನ್ನು ತಮ್ಮ "ಹಿಂದೂ"ಧರ್ಮದಿಂದ ಬಹಿಷ್ಕರಿಸುವರೆ?
 
ಒಂದೆಡೆ ಕಾಮವನ್ನು ಅತಿಯಾಗಿ ವೈಭವೀಕರಿಸದೆ ಮತ್ತೊಂದೆಡೆ ಅದರ ತೃಣೀಕರಣವೂ ಕೂಡದೇ ಕೂಡದು ಅನ್ನುವ ಮಧ್ಯಮ ಮಾರ್ಗ ವ್ಯಕ್ತಿಗೂ ಸಮಾಜಕ್ಕೂ ಶ್ರೇಯಸ್ಕರವೆಂದು ನನ್ನ ನಂಬಿಕೆ. ಅದೇ ನನಗೆ ತಿಳಿದ ಹಾಗೆ ಸನಾತನ ಧರ್ಮದ ಮಾರ್ಗ. ಮಾನವನ ಪ್ರತಿಯೊಂದು ಆಸೆಯನ್ನು, ಪ್ರತಿಯೊಂದು ಬೇಡಿಕೆಯನ್ನು ಸನಾತನ ಧರ್ಮ ಅಂಗೀಕರಿಸುತ್ತದೆ. ಆದರೆ ಎಲ್ಲಕ್ಕೂ ಕ್ರಮವನ್ನು ವಿಧಿಸುತ್ತದೆ. ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯತಕ್ಕದ್ದು. ಆದರೆ ಧರ್ಮವೇನು ಅಧರ್ಮವೇನೆಂಬುದರ ಪ್ರಶ್ನೆಯೇ ಮೂಲದ್ದು. ಅದರ ಅರಿವು ಮಂಥನದ ನಂತರ ಆಗುತ್ತದೆ. ನನಗಂತೂ ಧರ್ಮವೇನೆಂಬುದರ ಅರಿವು ಕಷ್ಟಗ್ರಾಹ್ಯ ಎಂದು ಮಾತ್ರ ತಿಳಿದಿದೆ. ಇದು ಇದೇ ಎಂದು ಹೇಳಲು ಬರುವುದಿಲ್ಲ. ಆದರೆ ಅ ನಿಟ್ಟಿನಲ್ಲಿ ಚಿಂತನೆ ಮುಖ್ಯವೆಂದು ಹೇಳುತ್ತಾ ಇಲ್ಲಿ ವಿರಮಿಸುವೆ.

|| ಇತಿ ಶಮ್ ||