Thursday, April 27, 2006

101 Dumbest moments in Business - 2005

101 Dumbest Moments in Business - January 01, 2006

This is a hilarious collection! Try this one for instance -

61 Farting shoes? What's not to like?

Florida-based Goosebumps Products, a maker of gel-filled shoe
inserts, sues supplier Bell Chem Corp., claiming that, by delivering
the wrong chemical, it had caused bubbles to form in the insoles that
emit "a flatulence-like noise" with each step. Goosebumps is forced to
dispose of at least 35,000 pairs and soon goes out of business.

And this -
83 The guy is falling! The guy is falling!

In November, parents and children attending a showing of Chicken
Little at AMC's Empire 25 in Manhattan instead get treated to Andrea, a
Spanish film that opens with a young man hanging himself from a tree.
Managers give audience members a refund or a coupon for a free movie.

Really funny!

Wednesday, April 26, 2006

Plug for Performancing

I am using performancing for firefox.

Performancing is a firefox extension which is a cool WYSIWYG editor and a lot more. I see that is a really cool tool for blogging and I would ask all of you to check it out. It comes with support for various services like blogger, wordpress and technorati.

Hindu - what does it mean?

APPENDIX 3 - MEANING OF THE WORD “HINDU”

The above is a link to an appendix in Sitaram Goel's book. It is an informative and thoughtprovoking piece on the word 'Hindu' and its fortunes down the ages. This comes all the way from how contemptuously the word 'Hindu' was used by Zoroastrians and later by Muslims to how it was used with pride during the 14th Century CE by various Hindu kings. It doesn't stop there but continues with how the British/Communist/Christian imperialists view the word 'Hindu'. Now, the so-called Dalits are using Hindu as a four letter word.

The word has travelled through the ages and means different things to different people. Click on the above link to read more.

Tuesday, April 25, 2006

ನಾನು ಕಾಣದ (ಆದರೂ ಚರಿತ್ರೆಯಲ್ಲಿ, ಪುಸ್ತಕಗಳಲ್ಲಿ ಕಂಡ) ದೆಹಲಿ

outlookindia.com, more than just the news magazine from India
Mean Streets... All HQ, No IQ : outlookindia.com

ಮೇಲಿನ ಕೊಂಡಿಯನ್ನು ಅನುಸರಿಸಿದರೆ ಅಂಜಲಿ ಪುರಿ ಎಂಬಾಕೆ ದೆಹಲಿಯ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುವ ಲೇಖನ ಕಾಣುತ್ತದೆ.

ಮೊದಲು ಒಂದು ಸಂಗತಿಯನ್ನು ಹೇಳಲೇಬೇಕು. ನಾನು ದೆಹಲಿಯನ್ನು ಪ್ರತ್ಯಕ್ಷವಾಗಿ ನೋಡೇ ಇಲ್ಲ. ಆದರೆ ಇವರು ಬರೆದ ಲೇಖನವನ್ನೋದಿದಾಗ ದೆಹಲಿಯ ಬಗ್ಗೆ ನನಗನ್ನಿಸಿದ ಅನಿಸಿಕೆಗಳೇ ಪ್ರತಿಧ್ವನಿಸಿದವು. ನಾನು ಓದಿರುವ, ಕಂಡಿರುವ ಸಂಗತಿಗಳ ದೆಸೆಯಿಂದ ಅನುಮಾನ(inference)-ಪೂರ್ವಕವಾಗಿ ಬರೆದದ್ದು ಇದು. ದೆಹಲಿಯ ಪ್ರೇಮಿಗಳ ಮನಸ್ಸನ್ನು ನೋಯಿಸಬೇಕೆಂದಲ್ಲ. ಅಂಥವರಿಗೆ ಈಗಲೇ ಹೇಳುತ್ತೇನೆ- ಮುಂದೆ ಓದಬೇಡಿ. ಓದಿದ ಮೇಲೆ ನನ್ನನ್ನು ದೂರಬೇಡಿ. ಎಚ್ಚರಿಸಿದ್ದೇನೆ, ಜಾಗ್ರತೆ!

ಈ ಲೇಖನವು ಒತ್ತಿ ಒತ್ತಿ ಹೇಳುವುದು - "ದೆಹಲಿಯು ಒಡ್ಡರ, ಅಸಂಸ್ಕೃತರ, ಕಾಳಜಿಯಿಲ್ಲದ ಜನಗಳ ನಗರ"ವೆಂದು. ನನ್ನ ಮನಸ್ಸು ಬುದ್ಧಿಗಳೂ ಈ ವಿಚಾರವನ್ನು ಅನುಮೋದಿಸುತ್ತವೆ.

ಔಟ್-ಲುಕ್ ನಂಥ ಪತ್ರಿಕೆಗಳಲ್ಲಿ ಯಾವಾಗಲೂ ಕಾಣುವ ಸಂಗತಿ ಸ್ತ್ರೀಯರ ಮೇಲಿನ ಅತ್ಯಾಚಾರ ಅತಿ ಹೆಚ್ಚಿರುವ ನಗರವೆಂದರೆ ದೆಹಲಿಯೆಂದೇ. ಮೇಲಿನ ಬರಹವು ಅಂಕಿ ಅಂಶಗಳೊಂದಿಗೆ ಯಾವ ಯಾವ ವಿಷಯಗಳಲ್ಲಿ ದೆಹಲಿ ಒಂದು ಕೆಟ್ಟ ನಗರವೆಂದು ತೋರಿಸಿದೆ. ರಸ್ತೆ ಕಟ್ಟಡಗಳು ದೆಹಲಿಯಲ್ಲಿ ಚೆನ್ನಾಗಿಯೇ ಇವೆ ಎಂದು ಹೇಳಲೇಬೇಕು, ಬಹಳ ಜನ ಇದನ್ನು ಒಪ್ಪುತ್ತಾರೆ ಕೂಡ. ಆದರೆ ನಗರ ಎಂದರೆ ಬರೇ ರಸ್ತೆ ಕಟ್ಟಡಗಳಲ್ಲ ತಾನೆ? ಒಂದು ನಗರಕ್ಕೂ ಮತ್ತದರ ಜನರಿಗೂ ಅವಿನಾಭಾವ ಸಂಬಂಧವಿದ್ದೇ ಇರುತ್ತದೆ.

ದೆಹಲಿ ಒಂದು ಐತಿಹಾಸಿಕ ನಗರ. ಮಹಾಭಾರತದ ಕಾಲದಿಂದಲೂ ಇಲ್ಲಿ ಜನಗಳಿದ್ದೇ ಇದ್ದರು, ಇದ್ದಾರೆ. ಆಗಿನ ಕಾಲದಿಂದ ವಿಧಿವಶಾತ್ "ಭಾರತದ ಭಾಗ್ಯದ ವಿಧಾತ"ರ ನಗರವಾಗಿ ಪರಿಣಮಿಸಿದೆ. ಇದರಿಂದ ಮೇಲಿನಿಂದ ಮೇಲಕ್ಕೆ ಅನರ್ಥಗಳು ನಡೆದೇ ನಡೆದಿವೆ. ಕೌರವ-ಪಾಂಡವರು ಇದ್ದದ್ದು ಇಲ್ಲೇ ಎಂದು ಮರೆಯಬಾರದು. ಅವರ ದಿನನಿತ್ಯದ ಕಾಳಗ-ಮನಸ್ತಾಪಗಳನ್ನು ಮಹಭಾರತ ಚೆನ್ನಾಗಿಯೇ ವರ್ಣಿಸಿದೆ. ಇದರ ಜೊತೆಗೆ ಹಸ್ತಿನಾವತಿಯಲ್ಲೇ ಪ್ರಾಯಃ ಹುಟ್ಟಿದ, ಅಂದರೆ ಅಪ್ಪಟ ದೆಹಲಿಯವರೇ ಆದ, ಕೌರವರು ಮಾಡಿದ ಅತ್ಯಾಚಾರಗಳು ಸರ್ವವಿದಿತ. ದ್ರೌಪದಿಯ ಮಾನಭಂಗಕ್ಕೆ ಯತ್ನಿಸಿದ ದುರ್ಯೋಧನ-ದುಃಶಾಸನರು ಈಗಿನ ದೆಹಲಿಗರಿಗೆ ಪೂರ್ವಜರು. ಆದರೆ ಅವರ ಮಾದರಿಯನ್ನೇ ಅನುಸರಿಸುತ್ತಿರುವ ಇಂದಿನ ದೆಹಲಿಯ ಕೆಲಭಾಗದಷ್ಟು ಪುರುಷವರ್ಗವನ್ನು ಕಂಡಾಗ ಮನಸ್ಸಿಗೆ ಖೇದವಾಗದೇ ಇರದು. ಸ್ವಾರಸ್ಯದ ಒಂದಂಶ ಗಮನಿಸಬೇಕು. ಪಾಂಡವರು ಹುಟ್ಟಿದ್ದು ಹಿಮಾಲಯದ ಅರಣ್ಯಗಳಲ್ಲಿ. ದೆಹಲಿಯಲ್ಲಿ ಹುಟ್ಟದ ಕಾರಣದಿಂದ ಅವರಲ್ಲಿ ಧರ್ಮವಿದ್ದಿರಬೇಕೋ ಏನೊ !

ಈ ಜಗಳದಿಂದ ಕುರುಕ್ಷೇತ್ರಯುದ್ಧ ಸಂಭವಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಈ ನಗರದಲ್ಲಿ ಹುಟ್ಟಿದ ಅಶಾಂತಿಯ ವಾತಾವರಣ ಧರ್ಮಯುದ್ಧಕ್ಕೇ ಮಾತ್ರವಲ್ಲದೆ ದೇಶದ ಎಲ್ಲೆಡೆಗಳಿಂದ ಬಂದ ಸೈನ್ಯಗಳ ಅಪಾರ-ಪ್ರಾಣಹಾನಿಗೂ ಕಾರಣವಾಯ್ತು. ಏನೋ ಒಂದು ಹಠಮಾರಿತನ, ಒಂದು ಅಸಡ್ಡೆಯ ಪ್ರವೃತ್ತಿ, ಮುಂಗೋಪ - ಇವೆಲ್ಲವೂ ಕೌರವರಲ್ಲೂ ಮತ್ತು ಅವರ ವಂಶಜರೇ ಆದ ಇಂದಿನ ದೆಹಲಿಗರಲ್ಲಿ ಸಮಾನವಾಗಿ ಕಾಣುತ್ತದೆ.

ಈ ಇತಿಹಾಸ-ಪುರಾಣಗಳ ಕಾಲದ ನಂತರ ಈಚೆಯ ಚರಿತ್ರೆಗೆ ಬರಬಹುದು. ರಾಜಾ ಧಿಲು (ದಿಲು?) ಎಂಬ ಒಬ್ಬ ರಾಜನಿಂದ ದೆಹಲಿಯ ಆಧುನಿಕ ಹೆಸರು ಬಂದಿತೆನ್ನುತ್ತಾರೆ. ಅದಿರಲಿ - ನಂತರ ಕೇಳಿಬರುವ ಹೆಸರು ಪೃಥ್ವೀರಾಜ ಚೌಹಾನನದು. ಪೃಥ್ವೀರಾಜ-ಸಂಯುಕ್ತರ ಪ್ರೇಮಕಥೆ ಎಲ್ಲರಿಗೂ ತಿಳಿದಿರುವುದೇ. ಪೃಥ್ವೀರಾಜನ ದುರಂತ ಕೂಡ ತಿಳಿದದ್ದೇ. ಅವನ ನಂತರ ಹಿಂದೂ ರಾಜರು ದೆಹಲಿಯನ್ನು ಆಳಿದ್ದು ಕಡಿಮೆ ಎನ್ನಬಹುದು. ಪೃಥ್ವೀರಾಜ ಒಳ್ಳೆಯ ಸೈನ್ಯವನ್ನು ಹೊಂದಿ ಶಕ್ತಿವಂತನಾಗಿದ್ದರೂ ಅವನ ಅಸಡ್ಡೆಯೇ ಅವನ ಮೃತ್ಯುವಾಯಿತು. ರಾಜರು ಹೆಚ್ಚಿದ್ದ ದೆಹಲಿಯಲ್ಲಿ ಈ ರಾಜಸ ಗುಣವೇ ತಾಂಡವವಾಡಿದೆ.

ಭಾರತವನ್ನು ಆಕ್ರಮಿಸಬಂದ ಇಸ್ಲಾಂ ಮತೀಯರಾಗಲಿ ಇನ್ನೂ ಯಾರಾದರಾಗಲಿ - ಅವರಿಗೆ ದೆಹಲಿಯನ್ನು ವಶಮಾಡಿಕೊಳ್ಳುವುದು ಅತ್ಯವಶ್ಯಕವಾಗಿತ್ತು. ಬಾಬರ - ಇಬ್ರಾಹಿಮ ಲೋದಿಯ ಕಾಳಗವಿರಬಹುದು - ಅಥವಾ ಅಕ್ಬರ-ಹೇಮೂಗಳ ನಡುವೆ ನಡೆದ ಎರಡನೇ ಪಾನಿಪತ್ತಿನ ಯುದ್ಧವಿರಬಹುದು. ಎಲ್ಲವೂ ದೆಹಲಿಯನ್ನು ಆಕ್ರಮಿಸಲೋಸುಗವೇ! ಮುಘಲರು ಆಕ್ರಮಿಸಿದ ನಂತರ ಅವರದ್ದೇ ನಗರವಾಗಿ ದೆಹಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷ ಉಳಿಯಿತು. ನಂತರ ಬಹಾದುರ ಷಾ ನನ್ನು ಓಡಿಸಿದ ನಂತರ ಬ್ರಿಟೀಷರ ಆಳ್ವಿಕೆ. ಕಲ್ಕತ್ತಾವನ್ನು ತೊರೆದು ದೆಹಲಿಯನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅದಾದ ಮೇಲೆ ಹಾಗೆಯೇ ಉಳಿದಿದೆ. ಕೆಂಪು ಕೋಟೆಯಲ್ಲಿ ಇಂದಿಗೂ ಸ್ವಾತಂತ್ರ್ಯ-ದಿನಾಚರಣೆಯಂದು ಅಂದಿನ ಪ್ರಧಾನ ಮಂತ್ರಿಗಳು ಭಾಷಣ ಮಾಡುತ್ತಾರೆ. ಹಲವು ರಾಜಕೀಯ ಧುರೀಣರ ಸಮಾಧಿಯನ್ನು ಹೊಂದಿದ ನಗರ ದೆಹಲಿಯಾಗಿದೆ. ಹಲವು ದೇಶಗಳ ರಾಯಭಾರಿಗಳ ಕಛೇರಿಗಳನ್ನು ಹೊಂದಿದ ನಗರವೂ ದೆಹಲಿಯೇ!

ಹೀಗೆ ತಲತಲಾಂತರಗಳಿಂದ ರಾಜಕೀಯ ಶಕ್ತಿಗೆ ದೆಹಲಿ ಕೇಂದ್ರವಾಗಿದೆ; ಪ್ರತೀಕವೂ ಆಗಿದೆ. ದೆಹಲಿಯನ್ನು ಹಿಡಿದವರು ದೇಶವನ್ನೇ ಹಿಡಿಯುವರು. ರಾಜಕೀಯ ಶಕ್ತಿಯಲ್ಲಿ ಸಾಮಾನ್ಯವಾಗಿ ಹಿಂಸೆಯ ಒಂದು ನಾಡಿ ಇದ್ದೇ ಇರುತ್ತದೆ. ಈ ರಾಜಕೀಯ ಶಕ್ತಿಯೇ ದೆಹಲಿಯ ಹಿಂಸಾಪ್ರವೃತ್ತಿಯ ಹಿಂದಿನ ಕಾರಣವಿರಬೇಕು.

ಅದಿರಲಿ. ಈಚೆಗೆ ಓದಿದ ಕಾದಂಬರಿ ಭೈರಪ್ಪನವರ ತಂತು. ಇದರಲ್ಲಿ ದೆಹಲಿಯ ಮತ್ತದರ ಜನರ ಪ್ರಮುಖ ಪಾತ್ರವಿದೆ. ಎಮರ್ಜೆನ್ಸಿಯ ಕಾಲಕ್ಕೆ ಸುಮಾರಾಗಿ ಬರುವ ಈ ಕಾದಂಬರಿ ವಿಶ್ವಕೋಶದ ಧಾಟಿಯಲ್ಲಿ ಆ ಕಾಲದ ಜನಮನವನ್ನು ಸೆರೆಹಿಡಿಯುತ್ತದೆ. ಕಲೆ, ಪತ್ರಿಕೋದ್ಯಮ,ರಾಜಕೀಯ, ವಾಣಿಜ್ಯ, ಅಧ್ಯಾತ್ಮ, ವಿದ್ಯಾಭ್ಯಾಸ - ಇವೆಲ್ಲದರ ಬಗ್ಗೆ ಮತ್ತು ಇವುಗಳ ನಡುವಿನ ಸಂಬಂಧದ ಬಗ್ಗೆ ಸೂಕ್ಷ್ಮವಿಶ್ಲೇಷಣೆಯನ್ನು ಹೊಂದಿದ ಭೈರಪ್ಪನವರ ಇಲ್ಲಿನವರೆವಿಗೂ ಅತಿ ದೊಡ್ಡ ಕೃತಿಯೆಂದರೆ ತಂತು. ಇದರಲ್ಲಿ ಕಾಂತಿಯೆಂಬ ಒಂದು ವಿಶಿಷ್ಟ ಪಾತ್ರವಿದೆ. ದೆಹಲಿಯ ಮಹತ್ವಾಕಾಂಕ್ಷೆಯನ್ನೆಲ್ಲಾ ಆಕೆಯಲ್ಲಿ ಭೈರಪ್ಪನವರು ಆವಾಹಿಸಿದ್ದಾರೆ. ಕೆಲಸ ಕೈಗೂಡಬೇಕೆಂದರೆ ಏನು ಮಾಡುವುದಕ್ಕೂ ಹೇಸದ ಛಲ. ಭ್ರಷ್ಟಾಚಾರವಾದರೂ ಮಹತ್ವಾಕಾಂಕ್ಷೆಯ ಸೇವೆಯಲ್ಲಿ ಅದೇ ಸದಾಚಾರವೆಂಬ ಧೋರಣೆ. ಇವೆಲ್ಲದರ ಜೊತೆಗೆ ಏನನ್ನೂ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ. ಆದರೆ ಇದರ ಜೊತೆಗೆ ಸೇರುವ ಪರರ ಭಾವನೆಗಳ ಬಗೆಗಿನ ಸಂವೇದನಾರಾಹಿತ್ಯ ಸೇರುತ್ತದೆ. ಅಂತಸ್ತೇ ಎಲ್ಲವೆಂಬ ಭ್ರಮೆ. ಇವೆಲ್ಲವೂ ಆ ಪಾತ್ರದಲ್ಲಿ ಕಾಣಿಸುತ್ತದೆ. ಇದು ಭೈರಪ್ಪನವರು ಬಹಳಷ್ಟು ದೆಹಲಿಗರನ್ನು ನೋಡಿಯೇ ಮಾಡಿದ ಪಾತ್ರವಿರಬೇಕು. ಮೂಲತಃ ಕನ್ನಡಿತಿಯದೇ ಆದ ಕಾಂತಿ ದೆಹಲಿಯಲ್ಲೇ ಹುಟ್ಟಿಬೆಳೆದದ್ದರಿಂದ ಅಲ್ಲಿನ ಗುಣಗಳನ್ನೇ (ಇಲ್ಲಿ ಗುಣವೆಂದರೆ characteristic ಎಂದು ಮಾತ್ರ) ತನ್ನದಾಗಿ ಮಾಡಿಕೊಳ್ಳುತ್ತಾಳೆ. (ಈ ಪುಸ್ತಕವನ್ನು ಓದದವರು ಒಂದು ಬಾರಿ ಓದಲೇ ಬೇಕೆಂದು ನನ್ನ ಸ್ನೇಹಪೂರ್ವಕ ಒತ್ತಾಯ. ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ ಎಂದು ಮಾತ್ರ ನಾನು ಭರವಸೆ ನೀಡಬಲ್ಲೆ.)

ನಾನು ದೆಹಲಿಯ ಸಂಪರ್ಕವನ್ನು ಹೊಂದಿದ ಜನರನ್ನು ಕಂಡಿದ್ದೇನೆ. ನಾನು ನೋಡಿದ ಜನರಲ್ಲಿ ಮೇಲೆ ಆ ಪಾತ್ರದಲ್ಲಿ ಹೇಳಿದ ಗುಣಗಳ ಜೊತೆಗೆ ಎದ್ದು ಕಾಣುವ ಗುಣ ಎಂದರೆ ಒಡ್ಡತನ. ಈ ಒಡ್ಡತನ ಗ್ರಾಮ್ಯವಾದ ಒಡ್ಡತನವಲ್ಲ. ಔಟ್-ಲುಕ್ಕಿನ ಲೇಖನದಲ್ಲಿ ಬರೆದಿರುವ ಹಾಗೆ - ಸೌಜನ್ಯವಿಲ್ಲದಿರುವಿಕೆ. ನೀವು ಒಂದು ಸರಣಿಯಲ್ಲಿ ನಿಂತು ನಿಮ್ಮ ಸರದಿಗಾಗಿ ಕಾಯುತ್ತಿದ್ದಾಗ ಮಧ್ಯೆ ನುಗ್ಗಿ ತನ್ನ ಕೆಟ ನಡೆನುಡಿಗಳಿಂದ ನಿಮ್ಮ ಮನಸ್ಸಿಗೆ ನೋವುಂಟುಮಾಡಿದರೂ ತನ್ನ ಕೆಲಸವನ್ನು ಮಾಡಿಕೊಳ್ಳುವ ಅಸೌಜನ್ಯ. ಇದನ್ನು ನಾನು ಬೇರೆ ಬೇರೆ ಸ್ತರಗಳಲ್ಲಿ ಕಂಡಿದ್ದೇನೆ. ನಾನು ಕಂಡ ಹಾಗೆ ಅವರಲ್ಲಿ ಒಂದು ಅವ್ಯಕ್ತ ಅನುಕ್ತ ಸ್ವ-ಪ್ರಶಂಸೆಯ ಛಾಯೆ ಮೂಡುತ್ತದೆ. ಇದಕ್ಕಿಂತ ವೈಯಕ್ತಿಕವಾಗಿ ನಾನು ಹೆಚ್ಚು ಹೇಳಲಾರೆ.

ಇದೇನು ದೆಹಲಿಯ ಬಗ್ಗೆ ಯಾವ ನಗರದ ಬಗೆಗೂ ಇರದಷ್ಟು ವಿಚಾರವೆಂದು ಕೇಳಿದರೆ ನನ್ನ ಉತ್ತರ ಹೀಗಿದೆ. ದೆಹಲಿ ಈಗ ಎಲ್ಲರಿಗೂ ಹೇಗೆ ಮುಖ್ಯವೋ ನನಗೂ ಹಾಗೆಯೇ ಮುಖ್ಯ. ನಮ್ಮ ದೇಶದ ರಾಜಕೀಯ ರಾಜಧಾನಿಯದು. ನಮ್ಮ ದೇಶದ ಚರಿತ್ರೆಯಲ್ಲಿ ಸಾವಿರ ಸಾವಿರ ವರ್ಷಗಳಿಂದ ಇರುವ ಕೇಂದ್ರಬಿಂದು ದೆಹಲಿ. ಇಂಥ ನಗರದ ಬಗ್ಗೆ ಕುತೂಹಲಾಸಕ್ತಿಗಳು ಮೂಡದಿರಲು ಹೇಗೆ ಸಾಧ್ಯ? ಸಂಸ್ಕೃತಿಯ ವಿದ್ಯಾರ್ಥಿಯಾಗಿ ಮಾತ್ರ ನಾನು ಗಮನಿಸಿದ ಕೆಲವು ಅಂಶಗಳನ್ನು ಹೇಳಬಯಸಿದ್ದೇನೆ, ಅಷ್ಟೆ.

ನನ್ನ ಜಿಜ್ಞಾಸೆ ಮುಂದುವರೆದಿದೆ. ನಗರವೊಂದು ದೇಶದ ರಾಜಧಾನಿಯಾಗಬೇಕಾದರೆ ಅದರಲ್ಲಿ ಏನಾದರೂ ವಿಶೇಷಗುಣವಿರಬೇಕೆ? ಕೌಟಿಲ್ಯನು ಇದರ ಬಗ್ಗೆ ಏನು ಹೇಳಿರುವನೋ ತಿಳಿಯದು. ದೆಹಲಿಯು ನಮ್ಮ ದೇಶದ ರಾಜಧಾನಿಯಾಗಲು ಅರ್ಹವೇ ಎಂಬ ಪ್ರಶ್ನೆಯು ಮನದಲ್ಲಿ ಮೂಡಿದೆ. ಇದು ಒಂದು academic question. ಅಷ್ಟೆ. ತುಘಲಕ್ ಮಾಡಿದ ಹಾಗೆ ರಾಜಧಾನಿಯನ್ನು ಬದಲಿಸಬೇಕೆಂಬ ಹುಚ್ಚುಬುದ್ಧಿ ನನಗಿಲ್ಲ. ಇದ್ದರೂ ನನ್ನ ಮಾತು ಕೇಳುವವರು ಯಾರು ?

ಇನ್ನೂ ಒಂದು ವಿಚಾರಾರ್ಹ ವಿಷಯ- ಇಂಥ ನಗರದಲ್ಲಿ ನಮ್ಮ ರಾಜಕೀಯ ನೇತಾರರು ನುಗ್ಗಿದಾಗ ಇವರ ಮನದಲ್ಲಿ ಏನಾದರೂ ಬುದ್ಧಿಭೇದವುಂಟಾಗುತ್ತದೆಯೇ? ಇದರಿಂದ ಅವರು ಮನಃಸ್ವಾಸ್ಥ್ಯವನ್ನು ಕಳೆದುಕೊಂಡು ದೇಶವನ್ನು ಆಳಲು ಅಸಮರ್ಥರಾಗುವರೇ? ಅಥವಾ ರಾಜಕೀಯಪುರುಷರಿಂದ ದೆಹಲಿಗೆ ಮತ್ತು ದೆಹಲಿಗರಿಗೆ ಈ ಗುಣ ಬಂದಿತೇ?

Wednesday, April 12, 2006

ಅಣ್ಣಾವ್ರ "ಅಭಿಮಾನಿ"ಗಳು

ನಿನ್ನೆ ಆಫೀಸಿನಲ್ಲಿಯೇ ತಿಳಿಯಿತು ರಾಜಕುಮಾರ್ ಅವರ ನಿಧನದ ವಾರ್ತೆ. ಅವರ "ಅಭಿಮಾನಿ"ಗಳೆಂದು ಹೇಳಿಕೊಂಡು ತಿರುಗುವವರು ಏನಾದರೂ ಅನಾಹುತ ಮಾಡಿಯೇ ತೀರುತ್ತಾರೆ ಎಂಬ ಅನುಮಾನ ಮನದಂಚಿನಲ್ಲಿ ಮೂಡುವ ಹೊತ್ತಿಗೆ ನನ್ನ ಸಹೋದ್ಯೋಗಿಯೊಬ್ಬ ಮೈಲ್ ಕಳಿಸಿದ್ದ. ಶಿವಾಜಿನಗರದಲ್ಲಿ ಬಸ್ಸುಗಳನ್ನು ಸುಟ್ಟರೆಂಬ ವಾರ್ತೆ. ಮತ್ತೊಬ್ಬರು ಹೌದೆಂಬಂತೆ ಹೇಳಿದರು. ಮನೆಯಿಂದಲೂ ದೂರವಾಣಿ ಕರೆ ಬಂದಿತು. ಸರಿಯೆಂದು ನೇರ ಮನೆಗೆ ಹೊರಟೆ.

ದಾರಿಯಲ್ಲಿ ಜನಸಮ್ಮರ್ದ ಹೆಚ್ಚಿರಲಿಲ್ಲ. ಆದರೆ ಮಾಗಡಿ ರಸ್ತೆಯ ಬಳಿ ಬಂದಾಗ ಅಲ್ಲಲ್ಲಿ ಬೆಂಕಿಗಳು ಕಾಣಿಸಿದವು. ಅಲ್ಲಲ್ಲಿ ಟೈರಿಗೋ; ಯಾರೋ ಪಾಪದವರ ವಾಹನಗಳಿಗೋ ಇಟ್ಟ ಬೆಂಕಿ. ಆದರೆ ಸ್ವಲ್ಪದರಲ್ಲಿಯೇ ಪೋಲೀಸ್ ವ್ಯಾನ್ ಕಂಡಿತು. ಅಲ್ಲಿ ನಿಂತು ನೋಡಲು ಯತ್ನಿಸಲಿಲ್ಲ. ಮನೆಯೆಡೆಗೆ ಗಾಡಿಯೋಡಿಸಿದೆ. ಅಲ್ಲಲ್ಲಿ ಕಲ್ಲು ಹೊಡೆಸಿಕೊಂಡ ಬಸ್ ಕಾಣಿಸಿತು. ವಾಹನದ ಮುಂದಿನ ಗಾಜನ್ನು ಸಂಪೂರ್ಣವಾಗಿ ಕಳೆದುಕೊಂಡರೂ ಬದುಕಿದೆಯಾ ಬಡಜೀವವೆಂಬ ಸಂತಸದಿಂದ ಗಾಡಿ ನಡೆಸಿದ್ದ ಒಬ್ಬಿಬ್ಬ ಬಸ್ ಚಾಲಕರೂ ಕಂಡರು. ಸಾರ್ವಜನಿಕ ಬಸ್ ಚಲನೆ ಸ್ಥಗಿತಗೊಂಡದ್ದರಿಂದ ಬಹಳಷ್ಟು ಜನರಿಗೆ ಅನನುಕೂಲವಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದ್ದ ಜನಸರಣಿ ಕಂಡಿತು. ಬಸ್ ನಿಲ್ದಾಣಗಳಲ್ಲಿ ಇದೋ ಬರುವುದೆಂಬ ಆಸೆ ಹೊತ್ತು ನಿಂತ ಹಲವರು ಕಂಡರು. ಅಲ್ಲಲ್ಲಿ ಎಬ್ಬಿಸಿದ್ದ ಶಾಮಿಯಾನಗಳಿಂದ ರಾಜಕುಮಾರ್ ಅವರ ಹಾಡುಗಳು ಕೇಳಿಬರುತ್ತಿದ್ದವು. "ಹೊಸ ಬೆಳಕೂ... ಮೂಡುತಿದೇ..". ಧೀಮಂತ ನಟ-ಗಾಯಕನ ಸಂತಸದ ದನಿ ಆತನ ನಿಧನದ ಸಂಗತಿಯನ್ನೂ ಮರೆಸುವ ಹಾಗೆ ಕೇಳಿಸುತ್ತಿತ್ತು. ಆ ಹಾಡುಗಳ ಗುಂಗಿನಲ್ಲಿಯೇ ಮನೆ ಸೇರಿದೆ.

ರಾಜಕುಮಾರ್ ಅವರು ನಟಿಸಿದ್ದ ಚಿತ್ರಗಳ ನೆನಪಿನ ಜೊತೆಗೆ ಎದುರಿಗೆ ಕಾಣುವ ಸುಟ್ಟ ಟೈರಿನ ಸುಟ್ಟ ವಾಹನದ ವಾಸ್ತವ. ಅವರ ಹಾಡಿನ ನಾದದೊಂದಿಗೆ ಸರಿಯಾಗಿ ಸೇರದ ರಾಜಕುಮಾರರಿಗೆ ಮಾಡಿದ್ದ ಜಯಕಾರ.

ಮನೆಗೆ ಬಂದು ನೋಡಿದಾಗ ದೂರದರ್ಶನದ ಹಲವು ವಾಹಿನಿಗಳಲ್ಲಿ ಇದೇ ಸುದ್ದಿ. ಉದಯ ವಾರ್ತೆ ಮತ್ತು ಈ ಟಿವಿ ವಾಹಿನಿಗಳಲ್ಲಿ ವರನಟನ ವಾಸ್ತವ್ಯದ ಎದುರು ಸೇರಿದ್ದ ಜನಸಂದಣಿಯ ನಿರಂತರ ನೋಟ. ಮಧ್ಯೆ ರಾಜಕುಮಾರ್ ಅವರಿಗೆ ಭಾರತರತ್ನ ಕೊಡಬೇಕೆಂಬುದರ ಜೊತೆಗೆ ಏಳು ದಿನಗಳ "ಶ್ಲೋ"ಕಾಚರಣೆಯನ್ನು "ಕಟ್ಟುನಿಟ್ಟಿನಿಂದ" ನಡೆಸಬೇಕೆಂಬ "ಅಭಿಮಾನಿ"ಯ ಆಗ್ರಹ. ವಾಹನಗಳನ್ನು ಮುಗುಚಿ ಅದಕ್ಕೆ ಕಲ್ಲು ಹೊಡೆದು ಬೆಂಕಿಯಿಟ್ಟ ಕೆಲಸದ ನೇರ ಪ್ರಸಾರ. ಶ್ರದ್ಧಾಂಜಲಿಯನ್ನು ಸಲ್ಲಿಸಬಂದ ಗಣ್ಯ ವ್ಯಕ್ತಿಗಳ ಮುಖಗಳಲ್ಲಿ ರಾಜಕುಮಾರ್ ಅವರ ನಿಧನವನ್ನು ಕುರಿತ ಶೋಕ ಅವ್ಯಕ್ತವಾಗಿದ್ದು ಸ್ವಲ್ಪ ಪ್ರಚಾರ ಗಳಿಸಬಹುದೇನೋ ಎಂಬ ಉತ್ಸಾಹವೇ ಸುವ್ಯಕ್ತವಾದ ಹಾಗೆ ಕಾಣುತ್ತಿತ್ತು.

ಒಪ್ಪಿದೆ. ವಿಖ್ಯಾತ ನಟರು ಒಳ್ಳೆಯ ಮನುಷ್ಯರು ಆದ ಒಬ್ಬರ ನಿಧನವಾದಾಗ ದುಃಖವಾಗದೆ ಇರುವುದಿಲ್ಲ. ಅದೂ ರಾಜಕುಮಾರ್ ಅವರಂಥ ಅಪಾರವಾದ ಜನಮನ್ನಣೆಯನ್ನು ಗಳಿಸಿದ ನಟರು ಅಗಲಿದರೆ ದುಃಖ ಕಷ್ಟಸಹ್ಯವಾಗುವುದು. ಆದರೆ ಈ ದುಃಖಸಹನೆಯನ್ನೇ ನೆಪಮಾಡಿ ವಾಹನಗಳನ್ನು ಸುಡುವುದೇ? ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದೇ? ಪ್ರಪಂಚದ ಯಾವೆಡೆ ಈ ರೀತಿಯ ದುಃಖಪ್ರದರ್ಶನವಿರುವುದು? ಅಗಲಿದ ನಟರ ನೆನಪಿಗೆ ಮಸಿಯನ್ನು ಬಳಿಯುತ್ತಿದೇವೆಂಬ ಪರಿಜ್ಞಾನವೂ ಇಲ್ಲದೇ ಹೋಯ್ತೆ? ಇನ್ನು ಮುಂದೆ ರಾಜಕುಮಾರ್ ಅವರ ನೆನಪು ಬಂದಾಗ ಅವರ "ಅಭಿಮಾನಿ"ಗಳಿಂದಾದ ಅನನುಕೂಲದ ಕಹಿನೆನಪೂ ಸೇರಬೇಕೆ? ನಮಗೆಲ್ಲ ಗೊತ್ತು - ರಾಜಕುಮಾರ್ ಅವರು ಅವರ "ಅಭಿಮಾನಿ"ಗಳ ಈ ರೀತಿಯ ಕೆಲಸಗಳಿಗೆ ಎಂದೂ ಪ್ರೋತ್ಸಾಹ ನೀಡಿದವರಲ್ಲ. ಯಾರೋ ಕಿಡಿಗೇಡಿಗಳು ರಾಜಕುಮಾರ್ ಅವರ ಒಳ್ಳೆಯ ಹೆಸರಿಗೆ ಕಲಂಕ ತರಲು ಮಾಡಿದ ಪ್ರಯತ್ನವೇ ಇದು ಎಂದು ಮನಸ್ಸು ಹೇಳುತ್ತಿದೆ. ನಾನು "ಅಭಿಮಾನಿ" ಎಂದು " " ಗಳ ನಡುವೆ ಅಭಿಮಾನಿಯೆಂಬ ಪದವನ್ನು ಸೇರಿಸಿದ್ದು ಈ ರೀತಿ ಹಿಂಸೆ ಮಾಡುವ ಪ್ರವೃತಿಯುಳ್ಳ ರಾಜಕುಮಾರ್ ಅವರನ್ನೇ ಅವರ ಹಿಂಸೆಗೆ ನೆಪಮಾಡಿದಂಥವರನ್ನು ತೋರಿಸಲು. ನಿಜವಾದ ಅಭಿಮಾನಿಗಳಿಗೆ "" ಇರುವುದಿಲ್ಲ.

ನಿನ್ನೆ ಇದನ್ನೇ ಬರೆಯಲು ಹೊರಟವನು ಅವರ ನೆನಪನ್ನು ಈ ಅಸಮಾಧಾನದ ವಿಷಯದೊಂದಿಗೆ ಸೇರಿಸದೆ ಬೇರೆಡೆ ಬರೆಯೋಣವೆಂದು ಈಗ ಬರೆಯುತ್ತಿದ್ದೇನೆ. ಒಟ್ಟಿನಲ್ಲಿ ಒಂದು ಯುಗದ ಕೊನೆಯಾಗಿದೆ ಎಂಬ ಭಾವನೆ ಆವರಿಸಿತ್ತು. ಆದರೂ ರಾತ್ರಿ ಈ ಟಿವಿಯಲ್ಲಿ "ಅನುರಾಗ ಅರಳಿತು" ಚಿತ್ರದ ಪ್ರದರ್ಶನ ನಡೆದಿದ್ದಾಗ ಚಿತ್ರದಲ್ಲಿ ಮನಸ್ಸು ತನ್ನನ್ನೇ ಮರೆತಿತ್ತು. ಆದರೆ ಅಲ್ಲಿ ರಾಜಕುಮಾರ್ ಕಾಣಿಸಲಿಲ್ಲ. ಚಿತ್ರದ ನಾಯಕ ಶಂಕರ್ ವಿಜೃಂಭಿಸಿದ್ದ. ಥಟ್ಟನೆ ಅರಿವಾಯ್ತು ರಾಜಕುಮಾರ್ ಅವರ ನೈಜಾಭಿನಯದ ಶಕ್ತಿ. ಅವರು ನಿಧನರಾಗಿದ್ದರೂ ಅವರ ನಟನೆ ಆ ಸಂಗತಿಯನ್ನೇ ಮರೆಸಿತ್ತು. ನಟನೊಬ್ಬನಿಗೆ ಇದಕ್ಕಿಂಥ ಹೆಚ್ಚಿನ ಶಕ್ತಿ ಬೇಕೇ? ಅವರ ಚಿತ್ರಗಳಿರುವವರೆಗೂ ಅವರು ಅಜರಾಮರರೆಂದು ಉಲಿದ ಮನ ಮತ್ತೆ ಆ ಚಿತ್ರದಲ್ಲೇ ತಲ್ಲೀನವಾಯ್ತು. "ಅಭಿಮಾನಿ"ಗಳ ಕುಕೃತ್ಯಗಳ ಕಹಿನೆನಪು ಅಳಿದಿತ್ತು.

ಅಣ್ಣಾವ್ರು ಇನ್ನಿಲ್ಲ

ಒಂದೆರಡು ಘಂಟೆಗಳ ಹಿಂದೆ ಬಂದ ಸುದ್ದಿ. ವರನಟ ರಾಜಕುಮಾರ್ ಅವರು ದಿವಂಗತರಾಗಿದ್ದಾರೆ. ನಂಬಲು ಸಾಧ್ಯವೇ ಆಗುತ್ತಿಲ್ಲ. ಚಿಕ್ಕಂದಿನಿಂದ ಅವರು ನನ್ನ "ಗುರು" ಆಗಿದ್ದರು. ಆಗ ಬಿಡುಗಡೆಯಾಗುತ್ತಿದ್ದ ಎಲ್ಲ ಚಿತ್ರಗಳನ್ನೂ ನೋಡುತ್ತಿದ್ದೆ. ಬಿಡದೆ. ಅವರು ಅದ್ಬುತನಟನಾಸಾಮರ್ಥ್ಯ ಎಂಥವರನ್ನೂ ಸೆಳೆಯಲು ಸಮರ್ಥವಾಗಿತ್ತು. ಇದರ ಜೊತೆಗೆ ರಾಜ್ ಕುಮಾರ್ ಇರುವ ಚಿತ್ರವೆಂದರೆ ಸದಭಿರುಚಿಯ ಚಿತ್ರ, ಚೆನ್ನಾಗಿರುತ್ತದೆ ಎಂಬ ಖಾತ್ರಿ. ಅವರ ಚಿತ್ರದ ಅಂಟು ಚೀಟಿಗಳನ್ನು ಮನೆಯಲ್ಲಿ ಸಂಗ್ರಹಿಸಿ ಕಪಾಟಿನ ಮೇಲೆ ಕಿಟಕಿಯ ಗಾಜಿನ ಮೇಲೆಲ್ಲಾ ಅಂಟಿಸುತ್ತಿದ್ದೆ. ಅವರನ್ನು ಬೈದರೆ ಕೋಪ ಬಂದುಬಿಡುತ್ತಿತ್ತು. ಅಷ್ಟು ಇಷ್ಟ ನನಗೆ ಅವರನ್ನು ಕಂಡರೆ. ಇಂದಿಗೂ ಅಷ್ಟೆ.

ಕಸ್ತೂರಿ ನಿವಾಸ, ಬೇಡರ ಕಣ್ಣಪ್ಪ, ಭೂಕೈಲಾಸ, ಒಂದು ಮುತ್ತಿನ ಕಥೆ, ಬಂಗಾರದ ಮನುಷ್ಯ, ಜೀವನ ಚೈತ್ರ - ಹೇಳಲು ಹೊರಟರೆ ಇನ್ನೂರು ಚಿತ್ರಗಳು. ಎಲ್ಲವೂ ಸದಭಿರುಚಿಯ ಒಳ್ಳೆಯ ಚಿತ್ರಗಳು. ಅವರ ನಟನೆಯೇ ಅಲ್ಲದೆ ಅವರ ಕಂಠಸಿರಿ ಕೂಡ ಜನರ ಮನಗಳನ್ನು ಸೂರೆಗೊಂಡಿತ್ತು. ಕಛೇರಿಯಿಂದ ಮನೆಗೆ ಬರುವಾಗ ಬಾನುಲಿಯಲ್ಲಿ ಅವರದೇ ಭಕ್ತಿಗೀತೆಗಳ ಧ್ವನಿಮುದ್ರಿಕೆಯ ಪ್ರಸಾರ ನಡೆದಿತ್ತು. ಚಿಕ್ಕಂದಿನಿಂದ ಕೇಳುತಿದ್ದ ಆ ಧ್ವನಿಯ ಹಿಂದಿನ ಚೈತನ್ಯ ನಮ್ಮಿಂದ ದೂರ ಹೋದ ಅರಿವಾಗಿ ಮನಸ್ಸಿಗೆ ಬಹಳ ದುಃಖವಾಯಿತು. ಏನನ್ನೋ ಕಳೆದುಕೊಂದ ಭಾವನೆ ಎಲ್ಲೆಡೆ ಪಸರಿಸಿತು.

ಆದರೆ ಮನುಷ್ಯರು ಎಂದಾದರೂ ಮಡಿಯಲೇ ಬೇಕಲ್ಲವೆ? ಶರೀರವು ತನ್ನ ಧರ್ಮವನ್ನು ಪಾಲಿಸಿದೆ. ಮಣ್ಣಿನಿಂದ ಹುಟ್ಟಿ ಮಣ್ಣು ಸೇರುತ್ತಿದೆ.

ಅವರು ವಿಶೇಷವಾಗಿ ಎರಡು ಚಿತ್ರಗಳಲ್ಲಿ ನಟಿಸಲು ಆಸೆ ಪಟ್ಟಿದ್ದರು. ನೃಪತುಂಗ ಮತ್ತು ಭಕ್ತ ಅಂಬರೀಷ ಎಂಬ ಎರಡು ಚಿತ್ರಗಳಲ್ಲಿ. ನನಗೂ ಅದನ್ನು ನೋಡುವ ಕುತೂಹಲವಿದ್ದಿತು. ದುರದೃಷ್ಟವಶಾತ್ ಅವರಿಗೂ ಅವರ ಅಭಿಮಾನಿಗಳಾದ ಹಲವರಿಗೂ ಈ ಆಸೆ ಕೈಗೂಡಲಿಲ್ಲ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನನ್ನ ಪ್ರಾರ್ಥನೆ. ಅವರ ಕುಟುಂಬದ ಜನರಿಗೂ ಶಕ್ತಿ ನೀಡಲಿ.

Thursday, April 06, 2006

Song of Kali - A Novel of Horror

Song of Kali - Google Search

I came across this book when I was reading something about Dan Simmons, an author I had just come across. I read a piece by Dan Simmons on how the world would be if Islam took over - a scary but well written piece. Then I saw that his first big novel was titled "Song of Kali" and that this book had apparently won a Fantasy award when it was published in 1985-86.

Upon reading the gist, I found the idea of the story to be revolting. Apparently Dan Simmons had stayed for two days in Calcutta when he got so "enamoured" of the place that he got the idea for this novel. A synopsis of the novel from Amazon is as follows
The story concerns an American poet who travels with his Indian wife and their baby to Calcutta to pick up an epic poem cycle about the goddess Kali. The Bengali poet who wrote the poem cycle has disappeared under mysterious circumstances.


The synopsis doesn't say it but I gathered from other sites that Goddess Kali had been portrayed as the Goddess of Death in the book. Further, Kali is likened to an evil spirit (much like Imhotep in the movie "the Mummy" and Voldemort in Harry Potter) that desires to be brought back from the dead so that the world could be ruled. Not just that, but Calcutta is shown to be hell on earth - the worst possible place that exists.

Upon reading this set of synopses and ignorant reviews, I, as a Hindu, was appalled at the way Kali and Calcutta had been shown in the book. In fact, this book might have caused several Western readers to have a revulsion towards India, sanAtana dharma and Kali in particular. I also felt a lot of anger and pity at the sheer stupidity of the author for not having gauged Kali (of course, Kali is not a concept that can be easily understood by adherents of simple minded good-bad religions) correctly. Since the book was published in the mid 80s, when there was no world wide web and as much communication as we have now, it must have created this barrier against India and her religions in the minds of the readers. To be fair, I have not read the book but Kali is definitely not the goddess of death. One must be a fool to say this.

Kali is Prakriti and She dances on Shiva who is Purusha. One can say that Kali is Brahman in action (very crude way of explaining things). She is beyond the mundane. One has to study the shAkta purANas, the tantras or at least the durgA saptashatI to see what Kali even feels like. Of course, knowing Kali would be Realization itself. The concept of kAlI is great but some of the methods in which She is worshipped can bring fear into the hearts of even the most ardent of devotees. She is worshipped in Right and Left paths (samayAchAra and vAmAchara). The Right (as in Left and Right and not as in Right and Wrong) path involves worship with flowers, fruits and such sAttvika elements. The Left path is the more horrifying one involving the pancha ma (the five mas including mAmsa (flesh), madya(liquor) and other things) in the milder cases and can possibly go to even human sacrifice. Though the Left mode of worship is followed mostly while worshipping kAlI, it is mostly restricted to animal sacrifice and possibly some liquor - but nowadays human sacrifice is unheard of (I do see a rare case once every few years- but that is hardly how kAlI is worshipped by most people). The English reader could study Arthur Avalon's (John Woodroffe's) works on Shakti to get a good idea. I don't know if this Simmons person went through these books at all. But even the best books do not illumine those who don't want to be illumined. And you have so many forms of kAlI - bhadrakAlI, soumyakAlI, dakShiNakAlI etc., Only a person bent upon propagating ignorance would call kAlI the goddess of Death. Even in the semitic religions, God strikes down the "infidels". Now, can He be called the God of Death and Jealousy by other religionists? That is exactly what Simmons has done.

And about Calcutta, it is in its present state owing mainly to the British and now the Communists. In spite of my not having been there, I don't think Calcutta becomes hell on earth. What would you call quite a few places in the Middle East then? What would you call North Korea?

It is a tragedy that such a work got the World Fantasy award and is being reprinted as a twentieth anniversary edition. We now know where the West is getting its biases from.