Wednesday, October 27, 2004

Another meaningless monologue

Well, this blog is not in Kannada. Why ? Just because I wanted to write in English.

Anyway, I've become yet another citizen of booming Bangalore. Bangalore has really grown. And even after more than a month since I got back, I feel the same. I've come to see that the traffic is uncontrollable after 9AM. So the wise thing for me to do would be to leave early to beat the traffic. But try as much as I do,I am unable to leave before 9 and so it takes an hour aand a quarter to get to work. Well, I am whining because this is my whining place.

I've been unable to do much reading since I got back - but I did manage to read one Bhyrappa novel - a small one - nAyiya neraLu. It is a very different kind of story and yet quite Bhyrappa-esque. I've begun another one - dATu - and this promises to be a real thought-provoker.

I see that Bangalore has kind of lost its soul in several parts. Yesterday I visited the Forum mall in Koramangala. Koramangala used to be this dull place which was never on the maps of Bangaloreans then. Now - whoa! I just felt like I was in some other region of the world. I could just see people dressed in trendy clothes roaming around the mall. You could be forgiven for thinking that you were in the US or someplace. Only the color of people's skin in the mall brought you back to reality. Which brings me back to Bangalore's soul.

When I think of Bangalore - Lalbagh, Cubbon Park, Vidhana soudha, Malleswaram Market, the Indian Coffee house on MG Road, the Plaza theatre and the Basavanagudi Bull Temple (yeah, I know I am saying the same thing twice) - come to mind. That is the soul, IMO, of Bangalore. A Bangalorean is cosmopolitan and yet traditional and at the same time. This is the paradox. But now the traditional aspect is wearing out and we see the plain cosmopolitan global Bangalore - with its usual share of McDonalds, Gucci Perfumes, Adidas and Van Heusen and the endless list of brands. It is just like any other mall in the world. So what - you may ask - Bangalore has become modern after all ! But what, I ask, is so distinctive of Bangalore ? What is its identity? Well, I suppose I should look at the people selling McDonalds burgers and Adidas sportswear! They are still Bangaloreans, right ? With this hopeful note, I conclude yet another rant.


Monday, October 18, 2004

ಅಂಕಲ್ ಇನ್ನಿಲ್ಲ

ಹೋದ ಶನಿವಾರ ನನ್ನ ನೆಚ್ಚಿನ ಅಂಕಲ್ ದಿವಂಗತರಾದರು. ಹದಿನೈದು ದಿನಗಳಿಂದ ಕೋಮಾದಲ್ಲಿದ್ದ ಅವರು ಈ ಭೂಮಿಯನ್ನು ಬಿಟ್ಟು ಹೊರಟರು. ಅವರ ಬಗ್ಗೆ ನಾನಾ ಭಾವನೆಗಳು ಮನದಲ್ಲಿ ಮೂಡಿದವು. ಅವುಗಳನ್ನೆಲ್ಲ ಇಲ್ಲಿ ಬರೆಯಲು ಸಾಧ್ಯವಿಲ್ಲ. ಆದರೂ ಕೆಲವು ತೋಚಿದ್ದನ್ನು ಬರೆದು ಅವರಿಗೆ ನನ್ನ ಶ್ರದ್ಧಾಂಜಲಿಯನ್ನು ನೀಡುವ ಪ್ರಯತ್ನ ಮಾಡುತ್ತೇನೆ.

ನನಗೆ ಅಂಕಲ್ ಎಂದರೆ ಮನಸ್ಸಿಗೆ ಬರುವುದು ಅವರ ಹಸನ್ಮುಖ. ಎಂದೂ ಅವರ ಮುಖದಲ್ಲಿ ನಗುವು ಇರದೇ ಇರಲಿಲ್ಲ. ಮನಸ್ಸಿನಲ್ಲಿ ಏನೇ ಭಾವನೆ ಇದ್ದರೂ ಅದನ್ನು ತೋರಿಸುತ್ತಿರಲಿಲ್ಲ. ಬೇರೆಯವರ ಮನಸ್ಸನ್ನು ನನ್ನ ಕಥೆಯಿಂದ ಏಕೆ ಹಾಳುಮಾಡಬೇಕು ಅನ್ನುವುದು ಅವರ ಧೋರಣೆಯಾಗಿತ್ತು. ಇದು ಅವರ ಆಂತರಿಕ ತುಮುಲವನ್ನು ಅವರೊಳಗೇ ಇಟ್ಟಿತ್ತೋ ಏನೋ ಎಂದೆನಿಸುತ್ತದೆ.

ಅವರು ಯಾವಾಗಲೂ ಒಳ್ಳೆಯ ಉಡುಪನ್ನು ಧರಿಸುತ್ತಿದ್ದರು. ಎಂದಿಗೂ ಅವರು full shirt ಧರಿಸದೆ ಹೊರಗೆ ಕಾಲಿಟ್ಟವರಲ್ಲ. ಚೊಕ್ಕಟವಾಗಿ ಮಾಡಿದ ಕ್ರಾಪು. ಬಳಿಗೆ ಹೋದರೆ ಲಘುವಾದ ಪರಿಮಳ - ಮೂಗಿಗೆ ಬಡಿಯುವಷ್ಟಲ್ಲ. ನಮ್ಮನ್ನು ನೋಡಿದರೆ ಇತರರು ಸಂತೋಷ ಪಡಬೇಕು ಎಂಬುದೇ ಅವರ ಆಸೆಯಿತ್ತು.

ಸಂಗೀತದಲ್ಲಿ ಅವರು ಅಷ್ಟು ಪರಿಣತರಾಗಿರದಿದ್ದರೂ ರಸಿಕರಾಗಿದ್ದರು. ಒಳ್ಳೆಯ ಕಛೇರಿಗಳನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಎಲ್ಲ ಸಂಗೀತಗಾರರ (ಹಳೆಯ ಮತ್ತು ಹೊಸ) ಧ್ವನಿಸುರುಳಿಗಳನ್ನೂ ಮನೆಯಲ್ಲಿಟ್ಟಿದ್ದರು - ಬಹಳಷ್ಟು ಸಲ ಕೇಳುತ್ತಿದ್ದರೂ ಕೂಡ. ನಾನು ಅವರ ಕಚೇರಿ partner ಆಗಿದ್ದೆ ಕೆಲವು ದಿವಸ.

ಅವರ ದೈವಭಕ್ತಿಯೂ ಅಪಾರವಾದದ್ದು. ದೊಡ್ಡ ಹುದ್ದೆಯಲ್ಲಿದ್ದು ಕೆಲಸ ಹೆಚ್ಚಿದ್ದರೂ ಅವರು ಬೆಳಗಿನ ಸಂಧ್ಯೆ ಜಪಗಳನ್ನು ತಪ್ಪಿಸುತ್ತಿರಲಿಲ್ಲ. ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ಇಷ್ಟದೇವತೆಗಳಾದ ಗಣೇಶ ಮತ್ತು ವೇಂಕಟೇಶ್ವರರನ್ನು ಸಂದರ್ಶಿಸುತ್ತಿದ್ದರು. ದೇವಸ್ಥಾನದ ಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದರು.

ಜನರ ಬಗ್ಗೆ ಪ್ರೀತಿ ಹೊಂದಿದ್ದರು. ಯಾರನ್ನೇ ಆಗಲಿ ತಾತ್ಸಾರ ಭಾವನೆಯಿಂದ ನೋಡುತ್ತಿರಲಿಲ್ಲ. ನಗುತ್ತಲೇ ಎಲ್ಲರನ್ನು ಮಾತಾಡಿಸುತ್ತಿದ್ದರು. ತಮ್ಮ ಸ್ವಂತ ಕುಟುಂಬದ ಜನರನ್ನು ಮಾತ್ರವಲ್ಲದೇ ತಮ್ಮ ಸಂಬಂಧಿಕರಲ್ಲೆರನ್ನೂ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಬಹಳಷ್ಟು ಜನರಿಗೆ ಉಪಕಾರವನ್ನು ಸಹ ಮಾಡಿದರು.

ಇವೆಲ್ಲರ ಜೊತೆಗೆ ಅಂಕಲ್ ತೀಕ್ಷ್ಣಮತಿಗಳಾಗಿದ್ದರು. ಹೊಸ ವಿಷಯವನ್ನು ಸುಲಭವಾಗಿ ಗ್ರಹಿಸಿಬಿಡುತ್ತಿದ್ದರು. ಜೊತೆಗೆ ವೃತ್ತಿಯಿಂದ ಹಿರಿಯ ವಿಜ್ಞಾನಿಯೆಂದು ಹೇಳಿದರೆ ಸಾಕು. ಅವರ ಬುದ್ಧಿಯ ತೀಕ್ಷ್ಣತೆಯ ಬಗ್ಗೆ ಇನ್ನೇನೂ ಹೇಳ ಬೇಕಾಗುವುದಿಲ್ಲ.

ಇವರ ದೊಡ್ಡ ಗುಣವೆಂದರೆ ಜೀವನಪ್ರೀತಿ. ಸಿನಿಮಾ ನೋಡೋಣವಾಗಲಿ, ಹೊರಗೆ ಊಟ ಮಾಡುವುದಾಗಲಿ, ಬೇರೆಯವರೊಡನೆ ಮಾತಾಗಲಿ, ಬೇರೆಯವರ ಮೇಲೆ ಬೀರಿದ ಪ್ರಭಾವವಾಗಲಿ - ಎಲ್ಲದರಲ್ಲೂ ಇವರು ವಿಶಿಷ್ಟರಾಗಿದ್ದರು. ಒಟ್ಟಿನಲ್ಲಿ ಇವರು ಸಜ್ಜನರು, ಅತ್ಯುನ್ನತ ಮಟ್ಟದ ಮನುಷ್ಯರು ಎಂದು ಹೇಳಿದರೆ ಅವರ ಬಗ್ಗೆ ಕಡಿಮೆ ಹೇಳಿದಂತೆಯೇ.

ವೈಯಕ್ತಿಕವಾಗಿ ನನಗೆ ಅಮೇರಿಕಕ್ಕೆ ಬರುವ ಹಾಗೆ ಮಾಡಿದ್ದು ಅವರೇ. ಸುಮ್ಮನೆ ಸೋಮಾರಿಯಾಗಿ ಕೂರಬೇಡ ಎದ್ದು ಕೆಲಸ ಮಾಡು ಎಂದು ಹೇಳಿದ್ದೇ ಅವರು. ನನ್ನ ವ್ಯಾಸಂಗ ಸಮಯದಲ್ಲಿ ವಾರಕ್ಕೊಮ್ಮೆಯಾದರೂ ಕರೆ ಕೊಟ್ಟು ನನ್ನ ಓದಿನ ಬಗ್ಗೆ ನಿಗಾ ವಹಿಸುತ್ತಿದ್ದರು. ಉದ್ಯೋಗವನ್ನು ಆರಿಸುವ ಕಾಲ ಬಂದಾಗ ಅವರ ಬಳಿಯಲ್ಲಿ ನಾನಿರಬೇಕೆಂದು ಒತ್ತಾಯಿಸಿದರು. ಇದರಿಂದ ನನಗೆ ಒಳಿತೇ ಆಯಿತು. ಅವರ ಇನ್ನೂ ನಿಕಟ ಸಂಪರ್ಕವುಂಟಾಗಿ ನನಗೆ ತಂದೆಯಂತೆ ಕಂಡರು.

ನಮ್ಮ ತಂದೆಯವರ ಮತ್ತು ನಮ್ಮ ಅಂಕಲ್ ಅವರ ನಡುವೆ ಅಪಾರ ಸ್ನೇಹ. ನಮ್ಮ ತಂದೆ ಅವರಿಗೆ ' ನೀನಿದ್ದೀಯೆಂದೇ ನಾನು ಇವನನ್ನು ಅಮೇರಿಕಕ್ಕೆ ಧೈರ್ಯವಾಗಿ ಕಳಿಸುತ್ತಿರುವುದು ' ಎಂದು ಹೇಳಿದ್ದರು.

ನಾನು ಭಾರತಕ್ಕೆ ಮರಳುವ ವಿಷಯವನ್ನು ಹೇಳಿದಾಗ ಅಂಕಲ್-ರಿಗೆ ಅದು ಹೆಚ್ಚು ಇಷ್ಟವಾಗಲಿಲ್ಲ ಎಂದನಿಸುತ್ತದೆ. ಆದರೆ ಅದನ್ನು ಹೊರಗೆ ವ್ಯಕ್ತಪಡಿಸಲಿಲ್ಲ. ಒಳ್ಳೆಯ ಆಶೀರ್ವಾದ ಮಾಡಿಯೇ ನನ್ನನ್ನು ನನ್ನ ಹೆಂಡತಿಯನ್ನೂ ಅಲ್ಲಿಂದ ಕಳಿಸಿದ್ದು. ಆಗಲೇ ಅವರನ್ನು ಕೊನೆಯ ಬಾರಿ ನೋಡುತ್ತೇನೆ ಎಂದು ಎಣಿಸಿರಲಿಲ್ಲ. ನಮ್ಮ ಹಳ್ಲಿಗೆ ಒಮ್ಮೆಯಾದರೂ ಬಂದಾರು ಎನ್ನುವುದು ನನ್ನ ಆಸೆಯಾಗಿತ್ತು. ಅವರ ಕೆಲಸದ ನಡುವೆ ಈಚೆಗೆ ಹೆಚ್ಚು ಸಲ ಭಾರತಕ್ಕೆ ಬಂದಿರಲಿಲ್ಲ. ನಾನು ಮರಳಿದ ಮೇಲೆ ಆಂಕಲ್ ಬಂದರೆ ಚೆನ್ನಿರುತ್ತದೆ ಎಂಬ ಆಸೆಯಿತ್ತು. ಅದು ಆಸೆಯಾಗಿಯೇ ಉಳಿದಿದೆ.

ಭಗವಂತನು ನಮ್ಮ ಆಂಟಿ ಮತ್ತು ಅವರ ಮಕ್ಕಳಿಗೆ ಕಷ್ಟದ ಈ ಘಳಿಗೆಯಲ್ಲಿ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎನ್ನುವುದೇ ನನ್ನ ಪ್ರಾರ್ಥನೆ. || ಸರ್ವೇ ಜನಾಃ ಸುಖಿನೋ ಭವಂತು ||

Tuesday, October 05, 2004

It's time we set things right, says Girish Kasaravalli

It's time we set things right, says Girish Kasaravalli
ಹಿಂದಿನ ನನ್ನ ಬ್ಲಾಗಿನಲ್ಲಿ ಕನ್ನಡ ಚಿತ್ರರಂಗ ನಡೆಸುತ್ತಿರುವ ಮುಷ್ಕರ ತಪ್ಪು ಎಂದು ಭಾವಿಸಿದ್ದೆ. ಆದರೆ ಒಂದೆರಡು ವಾರಗಳ ಹಿಂದೆ ಚಲನಚಿತ್ರರಂಗದಲ್ಲಿರುವ ಸಂಭಾಷಣಾಕಾರರೊಡನೆ ಮಾತು ನಡೆಯಿತು. ಅವರು ಹೇಳಿದ್ದು ನನ್ನ ಕಣ್ಣು ತೆರೆಸಿತು. ಬೇರೆ ಭಾಷೆಗಳ ಚಿತ್ರಗಳು ಪ್ರಥಮತಃ ಒಳ್ಳೆಯವೇನೂ ಇಲ್ಲ. ಅವುಗಳ ಮಟ್ಟ ನಮ್ಮ ಚಿತ್ರಗಳ ಮಟ್ಟಕ್ಕಿಂತ ಹೆಚ್ಚಿನದೇನಿಲ್ಲ. ಇನ್ನೊಂದು ದೊಡ್ಡ ಕಾರಣವೆಂದರೆ - ಚಲಚ್ಚಿತ್ರ ಪ್ರದರ್ಶಕರು ಮಾಡುವ ಅನ್ಯಾಯ. ಬೇರೆ ಭಾಷೆಗಳ ಚಿತ್ರಗಳು ಬೆಂಗಳೂರಿನಲ್ಲಿ ಹೆಚ್ಚು ದುಡ್ಡು ಮಾಡುತ್ತವೆ. ಏಕೆಂದರೆ ಕನ್ನಡಿಗರೂ ಬೇರೆಭಾಷೆಯ ಚಿತ್ರಗಳನ್ನು ನೋಡುವುದಕ್ಕೆ ನುಗ್ಗುತ್ತಾರೆ. ಜೊತೆಗೆ ಕನ್ನಡ ಚಿತ್ರಗಳನ್ನು ತೋರಿಸುವುದಿಲ್ಲ. ಏಕೆಂದರೆ - ಹಿಂದಿ,ತಮಿಳು, ತೆಲುಗು, ಮಲಯಾಳ, ಇಂಗ್ಲೀಷ್ ಭಾಷೆಗಳ ತಲಾ ೪ ಚಿತ್ರ ೩ ಚಿತ್ರಮಂದಿರಗಳಲ್ಲಿ ತೋರಿಸಬೇಕೆಂದರೆ ೧೨-೧೪ ಚಿತ್ರಮಂದಿರಗಳು (ವಸ್ತುತಃ ಇನ್ನೂ ಹೆಚ್ಚು) ಕನ್ನಡಕ್ಕೆ ಸಿಗುವುದಿಲ್ಲ. ಕನ್ನಡದ ನಿರ್ಮಾಪಕರು ಬಡವರೇ ಏಕೆಂದರೆ ಕರ್ಣಾಟಕದಲ್ಲಿ ಮಾತ್ರ ಕನ್ನಡ ಚಿತ್ರಗಳನ್ನು ನೋಡುವುದು. ಬೇರೆ ಭಾಷೆಗಳ ಚಿತ್ರಗಳು ಆಯಾ ಭಾಷೆಯ ರಾಜ್ಯದಲ್ಲಲ್ಲದೇ ಕರ್ಣಾಟಕದಲ್ಲಿಯೂ ದುಡ್ಡು ಮಾಡುತ್ತವೆ. ದುಡ್ದಿನ ಶಕ್ತಿ ಇರುವ ನಿರ್ಮಾಪಕರು ವಿತರಣೆದಾರರಿಗೆ ಒಳ್ಳೆಯ ಹಣದ ಆಸೆ ತೋರಿಸಿ ಕನ್ನಡದಿಂದ ಚಿತ್ರಮಂದಿರಗಳನ್ನು ಕಸಿದುಕೊಳ್ಳುತ್ತಾರೆ. ಇದು ಶುದ್ಧ ಮೋಸ. ಇದನ್ನೇ ವಿರೋಧಿಸುತ್ತಿರುವುದು. ಈ ಮೇಲಿನ ಲೇಖನದಲ್ಲಿ ಇದೇ ವಿಷಯವನ್ನು ಒಳ್ಳೆಯ ನಿರ್ದೇಶಕರಾದ ಕಾಸರವಳ್ಳಿಯವರೂ ಹೇಳಿದ್ದಾರೆ. ಸ್ವಲ್ಪ ಯೋಚಿಸಿದ ಮೇಲೆ ಇವರೇ ಸರಿ ಅನಿಸಿತು.

ನಮ್ಮ ಚಿತ್ರಗಳ ಗುಣಮಟ್ಟ ಹೆಚ್ಚಿಸಬೇಕು. ಆದರೆ ಬೇರೆ ಭಾಷೆಯ ಚಿತ್ರಗಳ ಮಟ್ಟವೇನೂ ಹೆಚ್ಚಿಲ್ಲ. ನಮ್ಮಲ್ಲಿ ನಮ್ಮ ಚಿತ್ರಗಳನ್ನು ಪ್ರೋತ್ಸಾಹಿಸದೆ ದೆಹಲಿಯಲ್ಲೋ ದುಬೈನಲ್ಲೋ ಮಾಡಬೇಕೇ ?

ಕನ್ನಡ ಚಿತ್ರ ರಸಿಕರೇ ಎದ್ದೇಳಿ! ಈ ಗೊಂದಲ ಬಗೆಹರಿದ ಮೇಲೂ ಕನ್ನಡ ಚಿತ್ರಗಳಿಗೇ ನಿಮ್ಮ ಆದ್ಯತೆ ಇರಲಿ. ಈ ಸಮಸ್ಯೆ ಕಳೆಯುವ ವರೆಗೂ ಪರಭಾಷಾ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿ. ಅವರಿಗೆ ದುಡ್ಡು ಮಾಡಿ ಕೊಟ್ಟದ್ದು ಸಾಕು. ನಮ್ಮ ಕಲಾವಿದರು ಇನ್ನಾದರೂ ಹಣದ ಮುಖ ನೋಡುವಂತಾಗಲಿ.

ಈ ವಾರದಲ್ಲಿ ನಾನು ಎರಡು ಕನ್ನಡ ಚಿತ್ರಗಳನ್ನು ನೋಡುತ್ತೇನೆ. ಒಂದು ಆಪ್ತಮಿತ್ರ. ಇನ್ನೊಂದು ಗೊತ್ತಿಲ್ಲ. ಆದರೆ ನನ್ನ ಜೇಬಿನಿಂದ ಕನ್ನಡಕ್ಕೆ ಸಹಾಯಮಾಡಬೇಕು. ಕೇವಲ ಮನದಿಂದಲ್ಲ. Put your wallet where your mouth is ಅನ್ನುತ್ತಾರಲ್ಲಾ ಹಾಗೆ. ನಾನು ಹಾಗೇ ಮಾಡುತ್ತೇನೆ. ಈ ಬ್ಲಾಗನ್ನು ಯಾರಾದರೂ ಕರ್ಣಾಟಕದಲ್ಲಿರುವವರು ನೋಡಿದರೆ ದಯವಿಟ್ಟು ತಮ್ಮ ಸಮೀಪದ ಚಿತ್ರಮಂದಿರದಲ್ಲಿ ಒಂದೆರಡು ಕನ್ನಡ ಚಿತ್ರ ನೋಡಿ ಪುಣ್ಯ ಕಟ್ಟಿಕೊಳ್ಳಿ.

|| ಎಲ್ಲರಿಗೂ ಒಳ್ಳೆಯ ಬುದ್ಧಿ ಬರಲಿ ||

ಸುಮ್ಮನೆ ಹೀಗೆ !!

ಬೆಂಗಳೂರಿಗೆ ಬಂದು ಇಂದಿಗೆ ಸರಿಯಾಗಿ ತಿಂಗಳಾಗಿದೆ. ತಿಂಗಳು ಹೋದದ್ದೇ ತಿಳಿಯಲಿಲ್ಲ. ಮೂರು ವಾರ ಕೆಲಸ ಮಾಡಿದೆ. ನಾಲ್ಕನೇ ವಾರದ ಕೆಲಸ. ಈಗ ಸ್ವಲ್ಪ ತಿಳಿಯುತ್ತಾ ಬಂದಿದೆ - ಇಲ್ಲೇ ಇರಲು ಬಂದಿದ್ದೇನೆ ಅಮೇರಿಕಕ್ಕೆ ಮರಳಿ ಹೋಗುವುದಿಲ್ಲ ಎಂದು. ಪ್ರತಿ ದಿನ ಬೆಳಗ್ಗೆಯೂ ಎದ್ದು ಆಫೀಸಿಗೆ ಬರುವುದು. ನಂತರ ರಾತ್ರಿ ಮನೆಗೆ ಹೊರಡುವುದು. ದಿನಕ್ಕೆ ಹತ್ತು ಇಲ್ಲವೇ ಹನ್ನೆರಡು ಘಂಟೆಗಳ ಕೆಲಸ. ಮುಂಚೆಯೆಲ್ಲಾ ಕರಾರುವಾಕ್ಕಾಗಿ ವಾರಕ್ಕೆರಡು ಬಾರಿ ಬ್ಲಾಗಿಸುತ್ತಿದ್ದ ನಾನು ಒಂದಷ್ಟು ದಿನಗಳಿಂದ ಮಾಡಿಲ್ಲವೆಂದರೆ ಅದೆಷ್ಟು ಕೆಲಸವೋ ನೋಡಿ.

ಇರಲಿ, ಈಗ ನಾನು ಬ್ಲಾಗಿಸುತ್ತಿರುವುದು ನನ್ನ ಡಿ.ಎಸ್.ಎಲ್ ಗಾಗಿ ನಡೆಸುತ್ತಿರುವ ಪರದಾಟದ ಬಗ್ಗೆ. ಅಮೇರಿಕದಲ್ಲಿ ನಮ್ಮ ಮೈಮೇಲೆ ಬೀಳುವುದೊಂದು ಬಾಕಿ. ಹಾಗೆ ದುಂಬಾಲು ಬೀಳುತ್ತಿದ್ದರು ನಮ್ಮ ಇಂಟರ್ನೆಟ್ ಸರ್ವೀಸ್ ಹಾಕಿಸಿಕೊಳ್ಳಿ ಅಂತ. ಇಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ. ಒಂದು ಕಂಪನಿಯನ್ನು ಮಾತಾಡಿಸಿದೆ. ಪ್ರತಿದಿನವೂ ಅರ್ಧಘಂಟೆ ವ್ಯಯ ಮಾಡಿ ಫೋನಿಸಿದ ಒಂದು ವಾರದ ನಂತರ 'ನಿಮ್ಮ ಏರಿಯಾದಲ್ಲಿ ನಮ್ಮ ಸರ್ವೀಸ್ ಇಲ್ಲ. ಸಾರಿ' ಎಂಬ ಉತ್ತರ ಬಂದಿತು. ಬೇರೆಡೆ ಪ್ರಯತ್ನ ನಡೆಸಿದೆ. ಸಾಕಷ್ಟು ಮುಂದುವರೆದಿದ್ದೆ ಕೂಡ. ನಾನು ಈ ಕಂಪನಿಗೆ ಕೆಲಸ ಮಾಡುತ್ತಿದ್ದನೆಂದು ತಿಳಿಯಿತು. ಅದಕ್ಕೆ - 'ಸಾರ್, ನೀವು ಈ ಕಂಪನಿಯವರಾಗಿದ್ದರೆ ನಾನು ಸಹಾಯ ಮಾಡಲಾರೆ, ಇನ್ನೊಬ್ಬರು ಮಾಡುತ್ತಾರೆ' ಎಂದು ಹೇಳಿ ಇಡೀ ಕೆಲಸ ಮೊದಲಿನಿಂದ ಆರಂಭವಾಗಿದೆ. ಈಗಲೂ ಪ್ರತಿದಿನ ಹದಿನೈದು ನಿಮಿಷವಾದರೂ ಈ ಕಂಪನಿಯ ಜೊತೆ ಮಾತಾಡುತ್ತಿದ್ದೇನೆ. ಇನ್ನೂ ಫಲ ಸಿಕ್ಕಿಲ್ಲ. ಸಿಕ್ಕಿದ ನಂತರ ಹೇಳುತ್ತೇನೆ. ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಪ್ರತಿದಿನವೂ ದಿನಪತ್ರಿಕೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಓದುತ್ತಲೇ ಇರುತ್ತೇನೆ. ಅದೆಷ್ಟು ಚಟುವಟಿಕೆಗಳು! ಆದರೆ ಎಲ್ಲವೂ ಬೆಳಗ್ಗೆ ಅಥವಾ ಮಧ್ಯಾಹ್ನ ಇರುತ್ತ್ರವೆ. ಅಭಿಯಂತಾರರಾದ ನಮ್ಮಂಥವರಿಗೆ ಹೇಳಿ ಮಾಡಿಸಿದ್ದಲ್ಲ! ನೋಡಿ ನೋಡಿ ಬೇಜಾರು ಮಾಡಿಕೊಳ್ಳುವುದು ನನ್ನ ದೈನಂದಿನ ಪಾಡು.

ಅಂದ ಹಾಗೆ ಒಂದು ತಿಂಗಳಲ್ಲಿ ಒಂದು ಚಲನಚಿತ್ರವನ್ನೂ ಪೂರ್ಣವಾಗಿ ನೋಡಿಲ್ಲ. ಟಿ.ವಿ.ಯಲ್ಲೂ ಸೇರಿಸಿ! ಅಂದರೆ ಅಷ್ಟು ಸಮಯವಿಲ್ಲವೆಂದಲ್ಲ. ಅಷ್ಟು ಚ್ಯಾನಲ್ ಟಿ.ವಿ.ಯಲ್ಲಿದೇ ಎಂಬುದೇ ಕಾರಣ! ದಿನವೂ ನಮ್ಮ ತಾಯಿ-ತಂದೆ 'ಮುಕ್ತ' ಎಂಬ ಧಾರಾವಾಹಿ ನೋಡುತ್ತಾರೆ. ಪರವಾಗಿಲ್ಲ ಧಾರಾವಾಹಿ. ಆದರೆ ಇದಿಲ್ಲದೇ ಊಟವನ್ನೇ ಮಾಡುವುದಿಲ್ಲ ಎಂದು ಹೇಳುವ ನಮ್ಮ ತಾಯಿಯಂತೆ ನಾನಲ್ಲ.

ಅಚಾನಕ್ಕಾಗಿ ಕೆಲವು ದಿವಸಗಳ ಹಿಂದೆ ಅಮೇರಿಕದಲ್ಲಿರುವ ತಂದೆ ಸಮಾನರಾದ ಹಿರಿಯರಿಗೆ ಹೃದಯಾಘಾತವಾಗಿ ನಮಗೆಲ್ಲ ಬಹಳ ಬೇಜಾರಾಗಿದೆ. ಅವರು ಹೋರಾಟ ನಡೆಸುತ್ತಿದ್ದಾರೆ. ನಾವು ಇಲ್ಲಿದ್ದುಕೊಂದು ಏನೇನು ಮಾಡಲಾರದೆ ಬರೇ ಪ್ರಾರ್ಥನೆಯ ಮೊರೆಯನ್ನು ಹೊಕ್ಕಿದ್ದೇವೆ. ಆ ಭಗವಂತನೇ ತನ್ನ ಭಕ್ತನನ್ನು ಕಾಪಿಡಬೇಕು. ಈ ಘಟನೆ ನನ್ನ ಮನಸ್ಸಿನಲ್ಲಿ ನಾನಾ ವಿಚಾರಗಳನ್ನು ಸ್ಫುರಿಸಿತು. ಈ ವಿಚಾರಗಳನ್ನು ನಂತರದ ಬ್ಲಾಗಿಸುತ್ತೇನೆ. ಸದ್ಯಕ್ಕೆ ಇಷ್ಟು ಸಾಕು. || ಇತಿ ಶಮ್ ||